" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Thursday, July 2, 2015

ವಿಶ್ವ ಮಾದಕ ವಸ್ತು ನಿಷೇಧ ದಿನಾಚರಣೆಯಲ್ಲಿ ನಮ್ಮ ಮಕ್ಕಳು


ನಮ್ಮ  ಶಾಲೆಯಲ್ಲಿ ವಿಶ್ವ ಮಾದಕ ವಸ್ತು ನಿಷೇಧ  ದಿನಾಚರಣೆಯನ್ನು ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕಜನ ಜಾಗೃತಿ  ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ   ವಿವಿಧ  ಕಾರ್ಯಕ್ರಮಗ ಳೊoದಿಗೆ ನಡೆಸಲಾಯಿತು . 
ಇದರ ಅoಗವಾಗಿ ವಿದ್ಯಾರ್ಥಿಗಳ  ಮೆರವಣಿಗೆ ನಡೆಯಿತು . ಬಳಿಕ  ನಡೆದ ಜನ ಜಾಗೃತಿ  ಸಭೆ ಯನ್ನು ಜನ ಜಾಗೃತಿ  ಸಭೆಯ ಉಪಾದ್ಯಕ್ಷ  ಬಾಲಕೃಷ್ಣ  ವೊರ್ಕೊಡ್ಲುರವರು ಉದ್ಘಾಟಿಸಿದರು  ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ,ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಹಿ ಯೋಜನೆಯ ಮೇಲ್ವಿಚಾರಕಿ  ಸವಿತಾ . ಎ. ಶೆಟ್ಟಿ , ಸೇವಾ ಪ್ರತಿನಿಧಿಗಳು ,ಸ್ವಸಹಾಯ  ಸಂಘದ ಸದಸ್ಯೆಯರು ಉಪಸ್ಥಿತರಿದ್ದರು . ಹಿರಿಯ ಅಧ್ಯಾಪಿಕೆ  ಶಾಂತಕುಮಾರಿಯವರು  ಮಕ್ಕಳಿಗೆ ಪ್ರತಿಜ್ಞೆ  ಬೋಧಿಸಿದರು.
ಮಕ್ಕಳು ಮಾದಕ ವ್ಯಸನದ ವಿರೋಧಿ ದಿನದ ಬಗ್ಗೆ ಭಾಷಣ ಮತ್ತು ಮಾದಕ  ವ್ಯಸನದ  ಪರಿಣಾಮದ ಬಗ್ಗೆ  ಕಿರು ನಾಟಕವನ್ನು ಪ್ರದರ್ಶಿಸಿದರು. ಅಧ್ಯಾಪಕರು , ವಿಧ್ಯಾರ್ಥಿಗಳು  ಭಾಗವಹಿಸಿದರು .




Friday, June 26, 2015

ರಕ್ಷಕ -ಶಿಕ್ಷಕ ಸಂಘ (P.T.A) ದ ಸಭೆ

16-06-2015 ನೇ  ಮ೦ಗಳವಾರದoದು ನಮ್ಮ ಶಾಲಾ ರಕ್ಷಕ -ಶಿಕ್ಷಕ ಸಂಘ (P.T.A) ದ ಈ ಸಾಲಿನ ಮೊದಲ ಸಭೆ ಜರಗಿತು. ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲೂ  A+ ಪಡೆದ  ಕು.ಹರ್ಷ ಹಾಗೂ ಒoಭತ್ತು  ವಿಷಯಗಳಲ್ಲಿ A+ ಪಡೆದ  ವಿಶಾಖ್  ಇವರನ್ನು  ಶಾಲಾವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.. ಈ  ವರ್ಷದ ಶಾಲಾ ರಕ್ಷಕ -ಶಿಕ್ಷಕ ಸಂಘದ  ಅಧ್ಯಕ್ಷರಾಗಿ ಮಹಾಲಿಂಗ ಪಾಠಾಳಿ  ಹಾಗೂ ಮಾತೃ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸರೋಜ ಎಸ್ . ಭಟ್  ರನ್ನು ಆಯ್ಕೆ ಮಾಡಲಾಯಿತು. ಹನ್ನೆರಡು ಸದಸ್ಯರನ್ನು ಒಳಗೊಂಡ ಒಂದು ಸಮಿತಿಯನ್ನು ರೋಪೀಕರಿಸಲಾಯಿತು.  ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲುರವರು ಕಾರ್ಯಕ್ರಮಕ್ಕೆ ಸ್ವಾಗತಕೋರಿದರು ಹಾಗೂ ಅಧ್ಯಾಪಕರಾದ ವೆಂಕಟಕೃಷ್ಣ ರವರು  ಧನ್ಯವಾದವನ್ನು ಅರ್ಪಿಸಿದರು.

.

Sunday, June 14, 2015

ವಿಶ್ವ ಪರಿಸರ ದಿನಾಚರಣೆ ಜೂನ್ 5

ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5ರಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು ...ಹಿರಿಯ ಶಿಕ್ಷಕರಾದ  ಮಧುಸೂದನ ರವರು  ಮಕ್ಕಳಿಗೆ ವಿಶ್ವ ಪರಿಸರದ ಪ್ರತಿಜ್ಞೆ ಯನ್ನು ಬೋಧಿಸಿದರು. ಶಾಲಾ ನಾಯಕಿ ಕು.ಶೆರಲ್  ಮರಿಯ ಮಾಡ್ತಾ 'ಪರಿಸರದ  ಸಂರಕ್ಷಣೆ ಯಲ್ಲಿ  ಮಕ್ಕಳ ಪಾತ್ರ ' ದ ಬಗ್ಗೆ   ಲೇಖನ ಮಂಡಿಸಿದಳು . ಮಕ್ಕಳಿಗೆ ಗಿಡ ವನ್ನು ವಿತರಿಸಿದರು .. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರು ನಮ್ಮ ಅಸ್ತಿತ್ವ ದಲ್ಲಿ ಪರಿಸರ ಹೇಗೆ ಪ್ರಭಾವ ಬೀರಿದೆ ಎಂದೂ  ಮಕ್ಕಳು ಹೇಗೆ ಪರಿಸರವನ್ನು ಶುಚಿ ಯಾಗಿರಿಸಬೇಕೆ೦ದು  ತಿಳಿಸಿದರು ...

ಪ್ರವೇಶೋತ್ಸವ 2015-16

ನಮ್ಮ ಶಾಲಾ ಪ್ರವೇಶೋತ್ಸವವು  ಜೂನ್ 1ನೇ ತಾರೀಕಿನಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರ ನೇತೃತ್ವದಲ್ಲಿ ಜರಗಿತು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಬಾಲಕೃಷ್ಣ ವೊರ್ಕೊಡ್ಲು ಮಕ್ಕಳಿಗೆ ಶುಭ ಹಾರೈಕೆ ಮಾಡಿದರು.ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರು ಹಿತವಚನ ನುಡಿದು ಸ್ವಾಗತಿಸಿದರು.




Thursday, February 12, 2015

ಎ ಸ್ಸಿ ಮಕ್ಕಳಿಗೆ ಮೇಜು ಹಾಗೂ ಕುರ್ಚಿ ವಿತರಣೆ ......

10-02-2015 ನೇ ಮಂಗಳವಾರ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಶಾಲೆಯ 8,9 ಹಾಗೂ 10ನೇ  ತರಗತಿಯಲ್ಲಿ ಕಲಿಯುತ್ತಿರುವ  36  ಎಸ್ಸಿ (SC) ಮಕ್ಕಳಿಗೆ ಮೇಜು ಹಾಗೂ ಕುರ್ಚಿಯನ್ನು ವಿತರಿಸಲಾಯಿತು ...ಮೊದಲು ನಡೆದ ಸಭೆಯಲ್ಲಿ ಹಿರಿಯ ಅಧ್ಯಾಪಿಕೆ ಶಾಂತ ಕುಮಾರಿ ಟೀಚರ್  ಎಲ್ಲರನ್ನು ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಸಕಿಯವರು ಪಂಚಾಯತ್ ನ ಈ ಯೋಜನೆಯನ್ನು ಶ್ಲಾಘಿಸಿದರು..ಸಭೆಯಲ್ಲಿ ಶಾಲಾ ಪಿ .ಟಿ .ಎ  ಅಧ್ಯಕ್ಷರು ,ಎಸ್. ಅರ್ . ಜಿ ಸಂಚಾಲಕರು ,ಎಲ್ಲಾ ಶಿಕ್ಷಕರು, ಸಿಬ್ಬಂಧಿವರ್ಗ, ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು ... 





"ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ"

10-02-2015 ನೇ  ಮಂಗಳವಾರ  ಕೇರಳ ಅರಣ್ಯ ಹಾಗೂ ವನ್ಯಮೃಗ ಸಂರಕ್ಷಣಾ  ಇಲಾಖೆಯ ವತಿಯಿಂದ " ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ" ಎಂಬ ವಿಷಯದ ಕುರಿತು ಮಕ್ಕಳಿಗೆ  ವಿಚಾರ ಗೋಷ್ಠಿ ಯನ್ನು ಹಮ್ಮಿ ಕೊಳ್ಳಲಾಯಿತು... ಈ  ವಿಚಾರ ಗೋಷ್ಠಿಯಲ್ಲಿ  ಜಿಲ್ಲಾ ಅರಣ್ಯಾಧಿಕಾರಿ ಶ್ರೀ ಮುರಳೀಧರನ್ ರವರು ಹಾಜರಿದ್ದು ,ಸಂಪನ್ಮೂಲ ವ್ಯಕ್ತಿ ಶ್ರೀ ಭಾಸ್ಕರ ಬೆಳ್ಳೂರು ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು..





Tuesday, January 20, 2015


20-01-2015 : -ರಾಜ್ಯ ದಲ್ಲಿ ನಡಯುವ ರಾಷ್ಟ್ರೀಯ  ಕ್ರೀಡಾ ಕೂಟಕ್ಕೆ  ಉತ್ತೇಜನ ಸಂದೇಶ  ಹಾಗೂ ಪ್ರಚಾರ  ನೀಡುವ ಉದ್ದೇಶದಿಂದ ನಮ್ಮ ಶಾಲಾ ಮಕ್ಕಳು ಇಂದು  ಬೆಳಗ್ಗೆ "ರನ್ -ಕೇರಳ -ರನ್ " ಸಾಮೂಹಿಕ ಓಟದಲ್ಲಿ ಭಾಗವಹಿಸಿದರು.