" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Friday, June 26, 2015

ರಕ್ಷಕ -ಶಿಕ್ಷಕ ಸಂಘ (P.T.A) ದ ಸಭೆ

16-06-2015 ನೇ  ಮ೦ಗಳವಾರದoದು ನಮ್ಮ ಶಾಲಾ ರಕ್ಷಕ -ಶಿಕ್ಷಕ ಸಂಘ (P.T.A) ದ ಈ ಸಾಲಿನ ಮೊದಲ ಸಭೆ ಜರಗಿತು. ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲೂ  A+ ಪಡೆದ  ಕು.ಹರ್ಷ ಹಾಗೂ ಒoಭತ್ತು  ವಿಷಯಗಳಲ್ಲಿ A+ ಪಡೆದ  ವಿಶಾಖ್  ಇವರನ್ನು  ಶಾಲಾವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.. ಈ  ವರ್ಷದ ಶಾಲಾ ರಕ್ಷಕ -ಶಿಕ್ಷಕ ಸಂಘದ  ಅಧ್ಯಕ್ಷರಾಗಿ ಮಹಾಲಿಂಗ ಪಾಠಾಳಿ  ಹಾಗೂ ಮಾತೃ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸರೋಜ ಎಸ್ . ಭಟ್  ರನ್ನು ಆಯ್ಕೆ ಮಾಡಲಾಯಿತು. ಹನ್ನೆರಡು ಸದಸ್ಯರನ್ನು ಒಳಗೊಂಡ ಒಂದು ಸಮಿತಿಯನ್ನು ರೋಪೀಕರಿಸಲಾಯಿತು.  ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲುರವರು ಕಾರ್ಯಕ್ರಮಕ್ಕೆ ಸ್ವಾಗತಕೋರಿದರು ಹಾಗೂ ಅಧ್ಯಾಪಕರಾದ ವೆಂಕಟಕೃಷ್ಣ ರವರು  ಧನ್ಯವಾದವನ್ನು ಅರ್ಪಿಸಿದರು.

.

Sunday, June 14, 2015

ವಿಶ್ವ ಪರಿಸರ ದಿನಾಚರಣೆ ಜೂನ್ 5

ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5ರಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು ...ಹಿರಿಯ ಶಿಕ್ಷಕರಾದ  ಮಧುಸೂದನ ರವರು  ಮಕ್ಕಳಿಗೆ ವಿಶ್ವ ಪರಿಸರದ ಪ್ರತಿಜ್ಞೆ ಯನ್ನು ಬೋಧಿಸಿದರು. ಶಾಲಾ ನಾಯಕಿ ಕು.ಶೆರಲ್  ಮರಿಯ ಮಾಡ್ತಾ 'ಪರಿಸರದ  ಸಂರಕ್ಷಣೆ ಯಲ್ಲಿ  ಮಕ್ಕಳ ಪಾತ್ರ ' ದ ಬಗ್ಗೆ   ಲೇಖನ ಮಂಡಿಸಿದಳು . ಮಕ್ಕಳಿಗೆ ಗಿಡ ವನ್ನು ವಿತರಿಸಿದರು .. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರು ನಮ್ಮ ಅಸ್ತಿತ್ವ ದಲ್ಲಿ ಪರಿಸರ ಹೇಗೆ ಪ್ರಭಾವ ಬೀರಿದೆ ಎಂದೂ  ಮಕ್ಕಳು ಹೇಗೆ ಪರಿಸರವನ್ನು ಶುಚಿ ಯಾಗಿರಿಸಬೇಕೆ೦ದು  ತಿಳಿಸಿದರು ...

ಪ್ರವೇಶೋತ್ಸವ 2015-16

ನಮ್ಮ ಶಾಲಾ ಪ್ರವೇಶೋತ್ಸವವು  ಜೂನ್ 1ನೇ ತಾರೀಕಿನಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರ ನೇತೃತ್ವದಲ್ಲಿ ಜರಗಿತು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಬಾಲಕೃಷ್ಣ ವೊರ್ಕೊಡ್ಲು ಮಕ್ಕಳಿಗೆ ಶುಭ ಹಾರೈಕೆ ಮಾಡಿದರು.ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರು ಹಿತವಚನ ನುಡಿದು ಸ್ವಾಗತಿಸಿದರು.