" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Friday, September 29, 2017

ಕ್ಲಾಸ್ ಪಿ.ಟಿ.ಎ ಸಭೆ- ವಿದ್ಯಾರ್ಥಿಗಳ ಸಾಧನೆಯನ್ನು ಪರಿಶೀಲಿಸಿದ ಪೋಷಕರು

ಎಡನೀರು: ಮಗುವಿನ ಸರ್ವತೋಮುಖ ವಿಕಾಸದ ಮಂದಿರ ಎಂದರೆ ಶಾಲೆ,  ಶಾಲೆಯಲ್ಲಿ  ಮಗುವಿನ ಕಲಿಕೆ ಯಶಸ್ವಿಯಾಗಿ ಸಾಗಲು ಮನೆಯ  ಪರಿಸರ ಹಾಗೂ  ಪೋಷಕರ ಸ್ಥಿತಿ ಅವರ ಪ್ರೋತ್ಸಾಹ ಕೂಡ ಅಗತ್ಯ.       ತಮ್ಮ ತಮ್ಮ ಮಕ್ಕಳ  ಶೈಕ್ಷಣಿಕ ಪ್ರಗತಿಯ ಕುರಿತ   ಚರ್ಚೆ ನಡೆಸುವ ಸಲುವಾಗಿ  ಕ್ಲಾಸ್  ಪಿ. ಟಿ.ಎ  ಸಭೆಯನ್ನು ಕರೆಯಲಾಗಿತ್ತು. ಈ ಸಲದ ಕಾಲು ವಾರ್ಷಿಕ ಪರೀಕ್ಷೆಯ ಪಲಿತಾಂಶದ ಆಧಾರದಲ್ಲಿ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಪೋಷಕರಲ್ಲಿ ಸಮಾಲೋಚನೆ ನಡೆಸಿದರು. 10ನೇ ತರಗತಿಯ ಪಿ. ಟಿ.ಎ ಸಭೆ 26ನೇ ತಾರೀಕು ಮಂಗಳವಾರ  ಹಾಗೂ  9ನೇ ತರಗತಿ ಪಿ. ಟಿ.ಎ ಸಭೆ 27ನೇ ತಾರೀಕು,ಹಾಗೇ  8 ಹಾಗೂ 7-5 ತರಗತಿಯ ಪಿ. ಟಿ.ಎ ಸಭೆ 28ನೇ ಗುರುವಾರ  ಸಂಜೆ 3:30 ರ ನಂತರ ನಡೆಯುತು. ಈ ಸಭೆಯಲ್ಲಿ  ರೋಬೆಲ್ಲಾ ರೋಗಕ್ಕೆ ಹಾಕುವ ಲಸಿಕೆಯ ಕುರಿತಂತೆ ಪೋಷಕರಿಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರಿ ವೈದ್ಯರು  ಭಾಗವಹಿದ್ದರು.
               

ದಸರಾ ಹಬ್ಬದ ಪ್ರಯುಕ್ತ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರು

ಕಾಸರಗೋಡು: ದಸರಾ ಹಬ್ಬದ ಪ್ರಯುಕ್ತ  ಕಾಸರಗೋಡು  ಸರ್ಕಾರಿ ಕಾಲೇಜಿನಲ್ಲಿ  ಹೈಸ್ಕೂಲ್ ಶಾಲಾ  ಮಟ್ಟದಲ್ಲಿ ನಡೆದ  ವಿವಿಧ ಸ್ಪರ್ದೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಭಾಷಣ ಸ್ಪರ್ದೆಯಲ್ಲಿ  10ನೇ ಕ್ಲಾಸ್ ನ ವೀಣಾಸುಮತಿ, ಕವಿತಾರಚನೆಯಲ್ಲಿ 10ನೇ ತರಗತಿಯ ಅಂಬಿಕ , ಹಾಗೂ ಭಾವಗೀತೆ ಸ್ಪರ್ದೆಯಲ್ಲಿ  8ನೇ ತರಗತಿಯ ವೈಧೇಹಿ ಪ್ರೋತ್ಸಾಹಕ ಬಹುಮಾನ ಗಳಿಸಿದರು.  ಈ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ-ರಕ್ಷಕ  ಸಭೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ ಶಾರದಾ ಎಡೆಕೋಡ್ಲುರವರು ಅಭಿನಂದಿಸಿದರು.