" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Friday, October 27, 2017

ಉಪಜಿಲ್ಲಾಮಟ್ಟದ ಶಾಸ್ತ್ರಮೇಳದಲ್ಲಿ ಪ್ರಥಮ

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ  ಶಾಸ್ತ್ರಮೇಳದ ಹೈಸ್ಕೂಲ್   ವಿಭಾಗದ ಐ .ಟಿ  ಕನ್ನಡ ಟೈಪಿಂಗ್ ಸ್ಪರ್ಧೆಯಲ್ಲಿ  ವೈದೇಹಿ ಕೆ    'ಎ ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ   ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿನಿ  . ಎಡನೀರಿನ  ಕಳೇರಿ  ಗೋಪಾಲಕೃಷ್ಣ  ಹೇರಳ. ಕೆ  ಹಾಗೂ  ರಾಜೇಶ್ವರಿ.ಕೆ  ದಂಪತಿಯವರ ಸುಪುತ್ರಿ.

ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ದ್ವಿತೀಯ....

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ ಶಾಸ್ತ್ರ ಮೇಳದಲ್ಲಿ ಹೈಸ್ಕೂಲ್   ವಿಭಾಗದ ಐ .ಟಿ  ರಸಪ್ರಶ್ನೆ ಸ್ಪರ್ಧೆಯಲ್ಲಿ   ವಿವೇಕ ಎಸ್.  ಭಟ್   'ಎ ' ಗ್ರೇಡಿನೊಂದಿಗೆ ದ್ವಿತೀಯ  ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆಯಾಗಿದ್ದಾನೆ . ಈತ  ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿ. ಈತ ಎಡನೀರಿನ  ಕಳೇರಿ  ಡಾ . ಸುಬ್ರಹ್ಮಣ್ಯ ಭಟ್ ಹಾಗೂ  ಸರೋಜ ದಂಪತಿಯವರ ಸುಪುತ್ರ.

ಉಪ ಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ಪ್ರಥಮ

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ ಶಾಸ್ತ್ರಮೇಳದಲ್ಲಿ ಹೈಸ್ಕೂಲ್   ವಿಭಾಗದ ವೇಸ್ಟ್ ಮೆಟೀರಿಯಲ್ ಪ್ರೊಡೆಕ್ಟ್ಸ್ ಸ್ಪರ್ಧೆಯಲ್ಲಿ  ಕು . ಶ್ರೀಪ್ರಿಯ  ಎಮ್   'ಎ ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ   ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿನಿ.  ಅಧ್ಯಾಪಕರಾದ ಮಧುಸೂದನನ್ ಪಿ .ಯನ್  ಹಾಗೂ ರಾಜೇಶ್ವರಿ ಇವರ ಸುಪುತ್ರಿ. 

Tuesday, October 10, 2017

ಶಾರದಾ ಪೂಜೆ

ಎಡನೀರು: ಸ್ವಾಮೀಜೀಸ್  ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಶಾರದಾ ಪೂಜೆ ಜರಗಿತು.ಶಿಕ್ಷ ಕರು ,ಶಿಕ್ಷ ಕಿಯರೂ ಹಾಗೂ ಮಕ್ಕಳು ಭಜನೆ ಹಾಡಿದರು.ನಂ ತರ ಮಕ್ಕಳಿಗೆ ಪುಸ್ತಕ  ಓದಿಸಲಾಯಿತು.

Monday, October 9, 2017

ಶಾಲಾ ಕಲೋತ್ಸವ




ಎಡನೀರು :ಸ್ವಾಮೀಜೀಸ್ ಹೈಸ್ಕೂಲ್ ಎಡನೀರಿ ನಲ್ಲಿ ಅಕ್ಟೋಬರ್ 5ಮತ್ತು 6ನೇ ತಾರೀಕಿನಂದು ಶಾಲಾ ಕಲೋ ತ್ಸ್ ವವು ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಯವರಾದ ಶಾರದಾ ಅಡೆಕೋಡ್ಲು  ಶುಭ ಹಾರೈಸಿದರು . ನಂತರ ಭಾವಗೀತೆ ,ಗಾನ ಮೇಳ,ಮಿಮಿಕ್ರಿ ,ಒಪ್ಪನ ,ಸಂಘ ಗಾನ ,ನಾಟಕಸ್ಪರ್ಧೆಗಳು ನಡೆದವು .ವಿದ್ಯಾ ರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು .


Tuesday, October 3, 2017

ನಮ್ಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಎಡನೀರು: ಅಕ್ಟೋಬರ್ 2 ಸೋಮವಾರದಂದು ಗಾಂಧಿ ಜಯಂತಿಯನ್ನು  ಆಚರಿಸಲಾಯಿತು. ಬೆಳಗ್ಗೆ  ಶಾಲಾ  ಅಸ್ಸೆಂಬ್ಲಿ ನಡೆಸಲಾಯಿತು. ಹಿರಿಯ ಶಿಕ್ಷಕರಾದ ಮಧುಸೂಧನನ್ ರವರು ಮಕ್ಕಳನ್ನುದ್ದೇಶಿಸಿ ಮಾತನಾಡಿ ಗಾಂಧಿ ವಾದದ  ಪ್ರಮುಖ ಆಶಯವಾದ  ಶಾಲಾ ಪರಿಸರ ದ ಸ್ವಚ್ಛತೆಯ ಬಗ್ಗೆ  ಮಾತನಾಡಿದರು. ನಂತರ ಮಕ್ಕಳು  ಶಾಲಾ ಪರಿಸರವನ್ನು ಸ್ವಚ್ಛ ಗೊಳಿಸಿದರು. ಮಕ್ಕಳಿಗೆ  ಲಘು ಉಪಹಾರವನ್ನು ಕೊಡಲಾಯಿತು.