" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, August 25, 2015

ಓಣಂ ಹಬ್ಬದ ಸಂಭ್ರಮ

ನಮ್ಮ ಶಾಲೆಯಲ್ಲಿ  ಆಗೋಸ್ತು 21ರoದು ಓಣಂ ಹಬ್ಬವನ್ನು ಆಚರಿಸಲಾಯಿತು.ಹಬ್ಬದ ಪ್ರಯುಕ್ತ ಮಕ್ಕಳಿಗೆ ಹೂವಿನ ರಂಗೋಲಿ,ಓಣ೦ಪಾಟು,  ಸಂಗೀತ ಕುರ್ಚಿ,ಹಗ್ಗಜಗ್ಗಾಟ, ಸುಂದರಿಗೆ   ಬೊಟ್ಟು ಇಡುವ ಸ್ಪರ್ಧೆ,ಗೋಣಿ ಚೀಲ ಓಟ, ಸ್ಮರಣ ಶಕ್ತಿ ಸ್ಪರ್ಧೆ ನಡೆಸಲಾಯಿತು. ಹತ್ತನೇ ತರಗತಿಯ ಸುಧೀರ್ ಹಾಗೂ ವೈಶಾಖ್  ಸಿ .ಎಚ್ ಮಾವೇಲಿ, ವಾಮನನ ವೇಷ ಧರಿಸಿದರು .  ಆ ಬಳಿಕ ಓಣಂ ಹಬ್ಬ ದ ವಿಶೇಷ ಭೋಜನವನ್ನು ಮಕ್ಕಳು ಸವಿದರು . ಮುಖ್ಯೋಪಾಧ್ಯಾಯಿನಿ ಮಕ್ಕಳಿಗೆ ಓಣಂ ಹಬ್ಬದ  ಶುಭ ಹಾರೈಕೆ ನುಡಿದರು.   ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು  ಎಲ್ಲಾ ಅಧ್ಯಾಪಕ ವೃಂದ, ಸಿಬ್ಬಂಧಿ ವರ್ಗ ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 





 ಮಕ್ಕಳು ರಚಿಸಿದ ಹೂ ರಂಗೋಲಿ 
ಮಾವೇಲಿ  ಹಾಗೂ  ವಾಮನ  

Tuesday, August 18, 2015

ಸ್ವಾತಂತ್ರ್ಯ ದಿನಾಚರಣೆ


ಎಡನೀರು ಸ್ವಾಮಿಜೀಸ್ ಹೈಯರ್ ಸೆಕೆಂಡರಿ ಯಲ್ಲಿ ನಡೆದ  69 ನೇ   ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀ ನಾರಾಯಣ ಧ್ವಜಾರೋಹಣ ಮಾಡಿದರು .ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ದೇಶಭಕ್ತಿ ಗೀತೆ ,ರಸಪ್ರಶ್ನೆ ,ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳಸಿ ,ಹಿರಿಯರ ತ್ಯಾಗ ಬಲಿದಾನ,ರಾಷ್ಟ್ರ ಪ್ರೇಮ ವನ್ನು ನೆನಪಿಸುತ್ತದೆ , ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿಕೊಂಡು ರಾಷ್ಟ್ರದ ಹಿತಾ ಸಕ್ತಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಮುಖ್ಯೋಪಾಧ್ಯಾಯಿನಿ ಶಾರದ ಅಡೆಕೊಡ್ಲು ರವರು  ಹೇಳಿದರು. ಆನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ  ಬಹುಮಾನ ವಿತರಿಸಲಾಯಿತು . ಶಾಲಾ ಅಧ್ಯಾಪಕರು,ವಿದ್ಯಾರ್ಥಿಗಳು ,ರಕ್ಷಕರು,ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 

ಶಾಲಾ ಪಾರ್ಲಿಮೆಂಟ್ ರೂಪೀಕರಣ

                      

ನಮ್ಮ  ಶಾಲೆಯ 2015-2016ನೇ ಪಾರ್ಲಿಮೆಂಟ್  ರೂಪೀಕರಣವು  ಜರಗಿತು . ಪ್ರತಿಯೊoದು   ತರಗತಿ ಯ  ನಾಯಕ/ನಾಯಕಿ ಯನ್ನು  ಚುನಾವಣೆಯ  ಮೂಲಕ  ಆರಿಸಲಾಯಿತು.  ಆ  ಬಳಿಕ  ಶಾಲಾ ಮಕ್ಕಳ     ನಾಯಕ /ನಾಯಕಿ ಯನ್ನು   ಆಯ್ಕೆ ಮಾಡಲಾಯಿತು . ಶಾಲಾ ನಾಯಕ  ವೈಶಾಖ್.ಸಿ .ಯಚ್ ಹಾಗೂ   ಉಪನಾಯಕಿ  ಕು. ಶೆರಲ್ ಮೆರಿಯ  ಮಾಡ್ತ ಆಯ್ಕೆ ಗೊಂಡರು. ಸಮಾಜ ವಿಜ್ಞಾನ ಅಧ್ಯಾಪಕರಾದ ರಾಮಮೋಹನ್ ರವರು ನೇತೃತ್ವ ವಹಿಸಿದರು. ಎಲ್ಲಾ ಆಧ್ಯಾಪಕ ಅಧ್ಯಾ ಪಿಕೆಯರು ಉಪಸ್ಥಿತರಿದ್ದರು.