" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Thursday, July 2, 2015

ವಿಶ್ವ ಮಾದಕ ವಸ್ತು ನಿಷೇಧ ದಿನಾಚರಣೆಯಲ್ಲಿ ನಮ್ಮ ಮಕ್ಕಳು


ನಮ್ಮ  ಶಾಲೆಯಲ್ಲಿ ವಿಶ್ವ ಮಾದಕ ವಸ್ತು ನಿಷೇಧ  ದಿನಾಚರಣೆಯನ್ನು ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕಜನ ಜಾಗೃತಿ  ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ   ವಿವಿಧ  ಕಾರ್ಯಕ್ರಮಗ ಳೊoದಿಗೆ ನಡೆಸಲಾಯಿತು . 
ಇದರ ಅoಗವಾಗಿ ವಿದ್ಯಾರ್ಥಿಗಳ  ಮೆರವಣಿಗೆ ನಡೆಯಿತು . ಬಳಿಕ  ನಡೆದ ಜನ ಜಾಗೃತಿ  ಸಭೆ ಯನ್ನು ಜನ ಜಾಗೃತಿ  ಸಭೆಯ ಉಪಾದ್ಯಕ್ಷ  ಬಾಲಕೃಷ್ಣ  ವೊರ್ಕೊಡ್ಲುರವರು ಉದ್ಘಾಟಿಸಿದರು  ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ,ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಹಿ ಯೋಜನೆಯ ಮೇಲ್ವಿಚಾರಕಿ  ಸವಿತಾ . ಎ. ಶೆಟ್ಟಿ , ಸೇವಾ ಪ್ರತಿನಿಧಿಗಳು ,ಸ್ವಸಹಾಯ  ಸಂಘದ ಸದಸ್ಯೆಯರು ಉಪಸ್ಥಿತರಿದ್ದರು . ಹಿರಿಯ ಅಧ್ಯಾಪಿಕೆ  ಶಾಂತಕುಮಾರಿಯವರು  ಮಕ್ಕಳಿಗೆ ಪ್ರತಿಜ್ಞೆ  ಬೋಧಿಸಿದರು.
ಮಕ್ಕಳು ಮಾದಕ ವ್ಯಸನದ ವಿರೋಧಿ ದಿನದ ಬಗ್ಗೆ ಭಾಷಣ ಮತ್ತು ಮಾದಕ  ವ್ಯಸನದ  ಪರಿಣಾಮದ ಬಗ್ಗೆ  ಕಿರು ನಾಟಕವನ್ನು ಪ್ರದರ್ಶಿಸಿದರು. ಅಧ್ಯಾಪಕರು , ವಿಧ್ಯಾರ್ಥಿಗಳು  ಭಾಗವಹಿಸಿದರು .