" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Sunday, July 23, 2017

ಚಾಂದ್ರ ದಿನ ಪ್ರಯುಕ್ತ ರಸಪ್ರಶ್ನೆ

ಎಡನೀರು: ಜುಲೈ 21 ಚಾಂದ್ರ ದಿನ ಪ್ರಯುಕ್ತ ರಸಪ್ರಶ್ನೆ ಆಯೋಜಿಸಲಾಯಿತು. ಮುಖ್ಯೋಪಾದ್ಯಾಯಿನಿ ಶಾರದಾ ಅಡೆಕೊಡ್ಲುರವರು ಮಕ್ಕಳಿಗೆ ಚಾಂದ್ರದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.ನಂತರ ನಡೆದ ರಸಪ್ರಶ್ನೆಯಲ್ಲಿ ಯು.ಪಿ ವಿಭಾಗದಲ್ಲಿ 7 ನೇ ತರಗತಿಯ ಪೂಜಾ.ಕೆ  ಪ್ರಥಮ ಹಾಗೂ ದ್ವಿತೀಯ ಶ್ರಾವ್ಯ ಯನ್, ಹಾಗೂ ಹೈಸ್ಕೂಲ್ ವಿಭಾಗಲ್ಲಿ ಪ್ರಥಮ ವಿವೇಕ್ ಎಸ್ ಭಟ್ ಹಾಗೂ ದ್ವಿತೀಯ ಮಂಜುಶ್ರೀ ಶಿವಾಣಿ ಬಹುಮಾನ ಗಳಿಸಿದರು.

Sunday, July 2, 2017

ಶಿಕ್ಷಕ-ಪೋಷಕರ ಮೊದಲ ಸಭೆ :ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ..

ಎಡನೀರು: ಜೂನ್ 29 ಗುರುವಾರ , ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯ ಮೊದಲ ಶಿಕ್ಷಕ -ಪೋಷಕರ  ಸಭೆಯು  ಶಾಲೆಯ ಮುಖ್ಯ ಶಿಕ್ಷಕಿ ಶಾರದಾ ಅಡೆಕೋಡ್ಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ಶಿಕ್ಷಕರಾದ ಮದುಸೂಧನನ್ ರವರು ಎಲ್ಲರನ್ನೂ  ಸಭೆಗೆ ಸ್ವಾಗತಿಸಿದರು.  ಮುಖ್ಯ ಶಿಕ್ಷಕಿ ಮಕ್ಕಳ  ಸರ್ವಾಂಗಣ ವಿಕಾಸದಲ್ಲಿ  ಪೋಷಕರ ಪಾತ್ರ ದ ಕುರಿತು ಭಾಷಣದಲ್ಲಿ  ಹೇಳಿದರು. ಸಭೆಯಲ್ಲಿ  2016-17 ಸಾಲಿನ SSLC ಪರೀಕ್ಷೆಯಲ್ಲಿ  ಎಲ್ಲಾ  ವಿಷಯಗಳಲ್ಲೂ A+ ಗಳಿಸಿದ ದುರ್ಗಾ ಸಿ.ಎಚ್  ಹಾಗು 9 A+ ಗಳಿಸಿದ ಅಶ್ವಿನಿ ಎನ್.ಸಿ  ಇವರಿಗೆ ಅಭಿನಂದಿಸಲಾಯಿತು. ಸಭೆಯಲ್ಲಿ ವಿವಿಧ ಸಮಿತಿಯನ್ನು  ರಚಿಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್ ಸಭೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಶೈಲಜಾ ಟೀಚರ್  ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು  ಶಿಕ್ಷಕರಾದ ವೆಂಕಟ ಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಎಲ್ಲಾ ಶಿಕ್ಷಕರು ಹಾಗು ಪೋಷಕರು ಭಾಗವಹಿಸಿದ್ದರು.