" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Thursday, June 20, 2019

ವಾಚನ ವಾರ ಆಚರಣೆ

ಎಡನೀರು: ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೂನ್‌ 19 ತಾರೀಕಿನಂದು  ವಾಚನ ವಾರವನ್ನು ಉದ್ಘಾಟಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಮಧುಸೂದನನ್ ಪಿ.ಎನ್ ವರು ಉದ್ಘಾಟಿಸಿದರು. ಪಿ.ಎನ್ ಪಣಿಕ್ಕರ್ ಅವರ ನೆನಪಿನ ಅಂಗವಾಗಿ ಆಚರಿಸುವ ವಾಚನ ವಾರದ ಉದ್ದೇಶವನ್ನು ಮಕ್ಕಳಿಗೆ ತಿಳಿಸಿದರು. ಬಿ .ಆರ್ .ಸಿ. ಕಾಸರಗೋಡಿನ ಪ್ರತಿನಿಧಿಯಾಗಿ ಬಂದಂತಹ ಸುರೇಶ್ ಕುಮಾರ್ ಅವರು ಮಕ್ಕಳಿಗೆ ಓದುವಿನ ಮಹತ್ವ ಹೇಳಿದರು ಹಾಗೆ ಪುಸ್ತಕವನ್ನು   ನೀಡಿದರು..

Thursday, June 6, 2019

ಎಡನೀರು :06/06/19 ಸ್ವಾಮೀಜಿಸ್  ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ನಡೆಯಿತು.ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕನ ಶ್ಯಾಮ್ ರಾಜ ಅವರು ಈ ವರ್ಷವೂ  ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ,ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯರಾದ ಮಧುಸೂದನ್ ವರು , ಶಿಕ್ಷಕರಾದ ವೆಂಕಟಕೃಷ್ಣ ಹಾಗೂ ಜ್ಯೋತಿ ಲಕ್ಷ್ಮಿ ಯವರು ಮಕ್ಕಳಿಗೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಸಂಸ್ಕೃತ ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಯು.ಎಸ್.ಎಸ್ ಪರೀಕ್ಷೆ ಸ್ಕಾಲರ್ ಶಿಪ್ ಗಳಿಸಿದ ಶ್ಯಾಮ್ ಸುಬ್ರಹ್ಮಣ್ಯ ಶರ್ಮಾ ಅವನನ್ನು ಸನ್ಮಾನಿಸಲಾಯಿತು.