" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, July 14, 2015

ಶಾಲಾ ಕ್ಲಬ್ ಗಳ ಉದ್ಘಾಟನೆ




     ನಮ್ಮ ಶಾಲೆಯ ವಿದ್ಯಾರಂಗ  ಹಾಗೂ ಇತರ ಎಲ್ಲ ಕ್ಲಬ್ ಗಳ  ಉದ್ಘಾಟನೆ 10/07/2015 ರಂದು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ  ಶಾರದಾ ಡೆಕೋಡ್ಲು ರವರು ಹಣತೆ ಬೆಳಗಿಸಿ ಉದ್ಘಾಟಿಸಿದರು 2015ನ್ನು ಅಂತರಾಷ್ಟ್ರೀಯ ಮಣ್ಣಿನ ವರ್ಷ ಹಾಗು ಬೆಳಕಿನ ವರ್ಷವಾಗಿ ಆಚರಿಸುವುದರ ಮಹತ್ವವನ್ನು ಅರಿಯಲು ವಿಶೇಷವಾಗಿ ಹಣತೆ ಬೆಳಗಿಸಿ  ಉದ್ಘಾಟಿಸಿದರು .
     ಮಕ್ಕಳು ತಯಾರಿಸಿದ ವಿಜ್ಞಾನ ಸಂಚಿಕೆಗಳನ್ನು ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲುರವರು, ಸಂಸ್ಕೃತ ಅಧ್ಯಾಪಕ ಮಧುಸೂದನ,ವಿಜ್ಞಾನ ಅಧ್ಯಾಪಿಕೆ ಜ್ಯೋತಿಲಕ್ಷ್ಮಿ ,ಹಿಂದಿ  ಅಧ್ಯಾಪಿಕೆ ಶೀಮತಿ ಶೈಲಜಾ ರವರು ಬಿಡುಗಡೆ ಗೊಳಿಸಿದರು.ಮಕ್ಕಳಿಂದ ಸೆಮಿನಾರ್ ಮಂಡನೆ, ಪ್ರಯೋಗಗಳು ಮಣ್ಣಿನ ಸಂರಕ್ಷಣೆ ಬಗ್ಗೆ ಮಾಹಿತಿಯನ್ನೊಳಗೊಂಡ ಲೇಖನಗಳು,ಹಾಡು,ಕಿರುನಾಟಕ ಇತ್ಯಾದಿ ಜರಗಿತು. ಎಲ್ಲ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿನಿ ಕು ಹರ್ಷಿತಾ ಸ್ವಾಗತಿಸಿ  ಕು.ಸುಶ್ಮಿತಾ ಧನ್ಯವಾದ ಹೇಳಿದಳು.  ಕು. ಶೆರಲ್ ಮರಿಯ ಮಾಡ್ತ  ಕಾರ್ಯಕ್ರಮವನ್ನು  ನಿರೂಪಿಸಿದಳು 

ಬಯೋಗ್ಯಾಸ್ ಪ್ಲಾಂಟ್ ಉದ್ಘಾಟನೆ


       ಕೇರಳ ರಾಜ್ಯ ಕೃಷಿ ಇಲಾಖೆ ಹಾಗೂ ಚೆಂಗಳ ಪಂಚಾಯತಿನ ಸಹಯೋಗದೊಂದಿಗೆ ನಮ್ಮ ಶಾಲೆಗೆ ಅಳವಡಿಸಿದ ಬಯೋಗ್ಯಾಸ್  ಪ್ಲಾಂಟ್ ನ ಉದ್ಘಾಟನೆಯನ್ನು ಚೆಂಗಳ ಗ್ರಾಮ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿಸಮಿತಿಯ ಅಧ್ಯಕ್ಷರೂ,ಚೆಂಗಳ ಗ್ರಾಮ ಪಂಚಾಯತ್ ನ ಸದಸ್ಯರೂ ಆದ ಅಶ್ರಫ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿ ಯಾಗಿ ಚೆಂಗಳ ಕೃಷಿ ಭವನ ದ ಅಧಿಕಾರಿ ಶ್ರೀಮತಿ ಹೆನ್ನಾ ರವರು ಬಯೋಗ್ಯಾಸ್  ಪ್ಲಾಂಟ್ ನ ಬಗ್ಗೆ ಮಾಹಿತಿ ನೀಡಿದರು.
      ಶಾಲಾ ಮುಖ್ಯೋಪಾಧ್ಯಾ ಯಿನಿ  ಶೀಮತಿ ಶಾರದಾ ಎಡೆಕೋಡ್ಲು ರವರು ಅಧ್ಯಕ್ಷತೆ ವಹಿಸಿದರು.  ಶಾಲಾ ಅಧ್ಯಾಪಕ , ಸಿಬ್ಬಂಧಿ ವರ್ಗ  ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. NSS ನ ಪ್ರಧಾನ ಕಾರ್ಯದರ್ಶಿ ಹಾಗೂ ಹೈಯರ್ ಸೆಕೆಂಡರಿ ಅಧ್ಯಾಪಕರಾದ ವಾಸುದೇವ ಉಪಸ್ಥಿತರಿದ್ದರು. ಅಧ್ಯಾಪಕರಾದ ಮಧುಸೂದನ ರವರು ಸ್ವಾಗತಿಸಿ ಹಿರಿಯ ಅಧ್ಯಾ ಪಿಕೆ ಶಾಂತ ಕುಮಾರಿ ಯವರು ವಂದಿಸಿದರು . 



Thursday, July 2, 2015

ವಿಶ್ವ ಮಾದಕ ವಸ್ತು ನಿಷೇಧ ದಿನಾಚರಣೆಯಲ್ಲಿ ನಮ್ಮ ಮಕ್ಕಳು


ನಮ್ಮ  ಶಾಲೆಯಲ್ಲಿ ವಿಶ್ವ ಮಾದಕ ವಸ್ತು ನಿಷೇಧ  ದಿನಾಚರಣೆಯನ್ನು ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕಜನ ಜಾಗೃತಿ  ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ   ವಿವಿಧ  ಕಾರ್ಯಕ್ರಮಗ ಳೊoದಿಗೆ ನಡೆಸಲಾಯಿತು . 
ಇದರ ಅoಗವಾಗಿ ವಿದ್ಯಾರ್ಥಿಗಳ  ಮೆರವಣಿಗೆ ನಡೆಯಿತು . ಬಳಿಕ  ನಡೆದ ಜನ ಜಾಗೃತಿ  ಸಭೆ ಯನ್ನು ಜನ ಜಾಗೃತಿ  ಸಭೆಯ ಉಪಾದ್ಯಕ್ಷ  ಬಾಲಕೃಷ್ಣ  ವೊರ್ಕೊಡ್ಲುರವರು ಉದ್ಘಾಟಿಸಿದರು  ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ,ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಹಿ ಯೋಜನೆಯ ಮೇಲ್ವಿಚಾರಕಿ  ಸವಿತಾ . ಎ. ಶೆಟ್ಟಿ , ಸೇವಾ ಪ್ರತಿನಿಧಿಗಳು ,ಸ್ವಸಹಾಯ  ಸಂಘದ ಸದಸ್ಯೆಯರು ಉಪಸ್ಥಿತರಿದ್ದರು . ಹಿರಿಯ ಅಧ್ಯಾಪಿಕೆ  ಶಾಂತಕುಮಾರಿಯವರು  ಮಕ್ಕಳಿಗೆ ಪ್ರತಿಜ್ಞೆ  ಬೋಧಿಸಿದರು.
ಮಕ್ಕಳು ಮಾದಕ ವ್ಯಸನದ ವಿರೋಧಿ ದಿನದ ಬಗ್ಗೆ ಭಾಷಣ ಮತ್ತು ಮಾದಕ  ವ್ಯಸನದ  ಪರಿಣಾಮದ ಬಗ್ಗೆ  ಕಿರು ನಾಟಕವನ್ನು ಪ್ರದರ್ಶಿಸಿದರು. ಅಧ್ಯಾಪಕರು , ವಿಧ್ಯಾರ್ಥಿಗಳು  ಭಾಗವಹಿಸಿದರು .