" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Wednesday, June 21, 2017

ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21

ಎಡನೀರು: ಜೂನ್ 21 ,ಚೆಂಗಳ ಪಂಚಾಯತು ಮಟ್ಟ ದ ಅಂತರಾಷ್ಟ್ರೀಯ ಯೋಗ  ದಿನಾಚರಣೆಯನ್ನು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಯಿತು. ಮುಖ್ಯ ಶಿಕ್ಷಕಿ ಶಾರದಾ ಅಡೆಕೋಡ್ಲು ರವರು ಯೋಗದ  ಮಹತ್ವವನ್ನು ತಿಳಿಸಿದರು. ಪಂಚಾಯತ್  ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್  ಔಪಚಾರಿಕವಾಗಿ ಉದ್ಘಾಟಿಸಿದರು.ಡಾ.ಮಹಮ್ಮದ್ ಇಂಥಿಹಾಸ್ ರವರು ನಮ್ಮ ಆರೋಗ್ಯ ರಕ್ಷಣೆಯಲ್ಲಿ ಯೋಗ ದ ಮಹತ್ವದ ಕುರಿತು ತಿಳಿಸಿದರು.ಹಿರಿಯ ಶಿಕ್ಷಕರಾದ ಮಧುಸೂಧನನ್ ರವರು ಮಕ್ಕಳಿಗೆ ಪ್ರಾಣಯಾಮ ದ ಕುರಿತು ಹೇಳಿದರು. ಹಿರಿಯ    ಶಿಕ್ಷಕರಾದ ಗಂಗಾಧರನ್  ಸ್ವಾಗತಿಸಿ ವಾಸುದೇವನ್ ರವರು ವಂದಿಸಿದರು. ಶಿಕ್ಷಕರಾದ ವೆಂಕಟ ಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು.ನಂತರ
ಶ್ರೀ ವಿಶ್ವನಾಥ ಭಟ್  ಹಾಗೂ ಡಾ. ಮಹಮ್ಮದ್ ಇಂಥಿಹಾಸ್ ರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಯೋಗ ತರಭೇತಿ ನಡೆಸಲಾಯಿತು.







Monday, June 5, 2017

ವಿಶ್ವ ಪರಿಸರ ದಿನಾಚರಣೆ 


ವಿಶ್ವ ಪರಿಸರ ದಿನಾಚರಣೆ 

ಎಡನೀರು: ಸ್ವಾಮೀಜಿಸ್ ಹೈಸ್ಕೂಲ್ಎಡನೀರಿನಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು . ನಮ್ಮ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಕಲ್ಲೂರಾಯರು ಪರಿಸರ ದಿನಾಚರಣೆಯ ಮಹತ್ವ ವನ್ನು ಮಕ್ಕಳಿಗೆ ತಿಳಿಸಿದರು .ಶಾಲಾ ಮುಖ್ಯಶಿಕ್ಷಕಿ  ಶ್ರೀಮತಿ ಶಾರದ ಅಡೆಕೋಡ್ಲುರವರು ತಮ್ಮ ಪರಿಸರದ ಬಗ್ಗೆ ಕಾಳಜಿವಹಿಸುವಲ್ಲಿ ಮಕ್ಕಳ ಪಾತ್ರದ ಬಗ್ಗೆ ಹೇಳಿದರು. ನಂತರ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು .



ಶ್ರೀ ನಾರಾಯಣ ಶರ್ಮಾರಿಗೆ ಶ್ರದ್ಧಾಂಜಲಿ

ಶ್ರದ್ಧಾಂಜಲಿ 


 

 

 

 

ಸ್ವಾಮೀಜೀ ಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನ ಜವಾನರಾಗಿ ಸೇವೆಯಿಂದ ನಿವೃತ್ತಿ ಹೊಂದಿದ ಶ್ರೀ ನಾರಾಯಣ ಶರ್ಮರು ತಾರೀಕು 03-06-2017 ರಂದು ದೈವಾಧೀನರಾದರು . ಅವರ ಆತ್ಮಕ್ಕೆ ಸುಖ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ಶಾಲಾ ಮುಖ್ಯೋ ಪಾಧ್ಯಾಯರು ,ಅಧ್ಯಾಪಕರು ,ಸಿಬ್ಬಂದಿಗಳು ಹಾಗೂ ಮಕ್ಕಳು .

 

 

 

 

 

 

 

Sunday, June 4, 2017

ಎಲ್ಲಾ ವಿಷಯಗಳಲ್ಲೂ A+ ಗ್ರೇಡ್ ನೊಂದಿಗೆ ತೇರ್ಗಡೆಯಾದ ದುರ್ಗಾ ಸಿ.ಎಚ್.

ಎಡನೀರು: 2016-17 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಗ್ರೇಡ್ ನೊಂದಿಗೆ ತೇರ್ಗಡೆಯಾದ ಸ್ವಾಮೀಜೀಸ್ ಹೈಯರ್    ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ  ದುರ್ಗಾ ಸಿ.ಎಚ್.ಇವಳು ದೀಪಕುಮಾರ.ಪಿ. ಹಾಗು ಸರೋಜಿನಿ ಸಿ.ಎಚ್ ದಂಪತಿಗಳ ಪುತ್ರಿ.

Thursday, June 1, 2017

ಶಾಲಾ ಪ್ರವೇಶೋತ್ಸವ 2017-18

                       ಶಾಲಾ ಪ್ರವೇಶೋತ್ಸವ 2017-18

ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನಲ್ಲಿ  ಜೂನ್ ಒಂದನೇ ತಾರೀಕಿನಂದು ಶಾಲಾಪ್ರವೇಶೋತ್ಸವವುಜರಗಿತು.ಮಕ್ಕಳನ್ನುಮೆರೆವಣಿಗೆಯೊಂದಿಗೆ ಪ್ರವೇಶೋತ್ಸವದ ಗೀತೆಯನ್ನು ಕೇಳಿಸುವ ಮುಖಾಂತರ ಶಾಲೆಗೆ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದ ಎಡೆಕೋಡ್ಲುರವರು ಮಕ್ಕಳಿಗೆ ಶುಭ ಹಾರೈಸಿದರು.ಈ ದಿನ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ),ಇದರ ಗೌರವಾಧ್ಯಕ್ಷರಾದ ಶ್ರೀಮತಿ ಮತ್ತು ಶ್ರೀ ಗೋಪಾಲಕೃಷ್ಣ ಭಟ್ ಹಾಗೂ ಅಧ್ಯಕ್ಷೆಯಾದ ಶ್ರೀಮತಿ ಅನುಪಮಾ ರಾಘವೇಂದ್ರರವರು ನಮ್ಮ ಶಾಲೆಯ ಹೊಸ ವಿದ್ಯಾರ್ಥಿಗಳಿಗೆ ಪುಸ್ತಕ,ಪೆನ್ನು ಹಾಗೂ ಆರ್ಥಿಕವಾಗಿ ಹಿಂದುಳಿದ ಎಂಟು ವಿದ್ಯಾರ್ಥಿಗಳಿಗೆ ಎಲ್ಲಾ ಬರೆಯುವ ಪುಸ್ತಕಗಳನ್ನೂ, ಪೆನ್ನನ್ನೂ ವಿತರಿಸಿದರು.ಶಾಲಾ ಅಧ್ಯಾಪಕರೂ, ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.