" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Friday, November 12, 2021

2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಎಡನೀರು:2020-21 ನೇ ಸಾಲಿನ SSLC ಪರೀಕ್ಷೆಯಲ್ಲಿ  ಎಲ್ಲಾ ವಿಷಯಗಳಲ್ಲೂ 'ಎ+' ಗಳಿಸಿದ ವಿದ್ಯಾರ್ಥಿಗಳಾದ  ದೇವಿಕಾ ಶಿವಾನಿ,ಶ್ರಾವ್ಯ, ದೇವಿಕಾ ,ರೆಶ್ಮಿಪ್ರಭ,ಶೃತಿ,ಗುರುಕಿರಣ್, ಕೀರ್ತಿ  ಹಾಗೂ '9 ಎ+'ಗಳಿಸಿದ ವಿದ್ಯಾರ್ಥಿನಿಯಾದ ಪೂಜ‍ಾ ನನ್ನು ಶಾಲಾ ವತಿಯಿಂದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದರು.

Tuesday, March 3, 2020

ಶಾಲಾ ಕಲಿಕೋತ್ಸವ 26/02/2020

ನಮ್ಮ  ಶಾಲಾ ಕಲಿಕೋತ್ಸವವು 26 ನೇ ತಾರೀಖಿನಂದು ನಡೆಯಿತು. ಮುಖ್ಯೋಪಾಧ್ಯಾಯರಾದ ಮಧುಸೂದನನ್ ರವರು 7ನೇ ತರಗತಿಯ ಮಕ್ಕಳು ಸಿದ್ಧಗೊಳಿಸಿದ 'ವಿಂಗ್ಸ್'  ಎಂಬ ಮ್ಯಾಗಜೀನ್  ನ್ನು ಬಿಡುಗಡೆಗೊಳಿಸಿ  ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಪಿ.ಟಿ.ಎ ಉಪಾಧ್ಯಕ್ಷರಾದ ಪುರುಷೋತ್ತಮ ಕಲ್ಲುಗದ್ದೆಯವರು ಅತಿಥಿ ಯಾಗಿದ್ದರು.ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಿದರು. ವಿಜ್ಞಾನದ ಪ್ರಯೋಗ, ನಾಟಕ, ಸಮಾಜ ವಿಜ್ಞಾನದಲ್ಲಿ ಕಿರುನಾಟಕ, ಚಾರ್ಟ್, ಮೋಡೆಲ್ಸ್ , ಗಣಿತದಲ್ಲಿ  ಚಾರ್ಟ್ ಹಾಗೂ ಸೆಮಿನಾರ್ , ಇಂಗ್ಲೀಷ್‌ನಲ್ಲಿ ನಾಟಕ ಹಿಂದಿಯಲ್ಲಿ ಸಂಸ್ಕೃತದಲ್ಲಿ  ಹಾಡು ಹೀಗೆ ಹಲವಾರು ಕಾರ್ಯಕ್ರಮವನ್ನು ಮಕ್ಕಳು ನಡೆಸಿ ಕೊಟ್ಟರು. ಈ ಕಲಿಕಾ ವರ್ಷದಲ್ಲಿ  ಕಲಿತ  ಅನುಭವಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಿದರು.  ನಮ್ಮ  ಡಿ.ಪಿ.ಒ ಕಾರ್ಯಕ್ರಮವನ್ನು  ವೀಕ್ಷಿಸಿದರು.ಶಿಕ್ಷಕರು,ಪಿ.ಟಿ.ಎ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Saturday, November 9, 2019

ಕಾಸರಗೋಡು ಉಪಜಿಲ್ಲಾ ಮಟ್ಟದ ಸಂಸ್ಕೃತೋತ್ಸವದಲ್ಲಿ ಚಾಂಪಿಯನ್ ಪಡೆದ ಸ್ವಾಮೀಜೀ ಸ್ ಹೈಸ್ಕೂಲ್ ಎಡನೀರು

ಅಮ್ಮಂ ದಿರಿಗೆ ಐ. ಟಿ. ತರಬೇತಿ

ಎಡನೀರು: ಅಮ್ಮಂದಿರಿಗೆ ಐ.ಟಿ. ತರಬೇತಿಯಯು ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಜರಗಿತು. ಹೊಸ ಪಾಠ ಪುಸ್ತಕದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನರ್ , ಸಮಗ್ರ ಪೋರ್ಟಲ್,   ವಿಕ್ಟರ್ ಚಾನೆಲ್  ಇತ್ಯಾದಿಗಳ ಪರಿಚಯವನ್ನು ಮಾಡಿಕೊಡಲಾಯಿತು.  ಶಾಲಾ ಮುಖ್ಯೋಪಾಧ್ಯಾಯ  ಮಧುಸೂದನ್ ಉ ಪಸ್ಥಿತರಿದ್ದರು.  ಭಾರತಿ ಟೀಚರ್ ತರಬೇತಿ  ನೀಡಿದರು ಜ್ಯೋತಿಲಕ್ಷ್ಮಿ ಟೀಚರ್ ಸ್ವಾಗತಿಸಿ ಅಧ್ಯಾಪಕ ವೆಂಕಟಕೃಷ್ಣ ವಂದಿಸಿದರು.ಅಧ್ಯಾಪಕರು ಮತ್ತು   little kites ಮಕ್ಕಳು ಸಹಕರಿಸಿದರು

ಉಪ ಜಿಲ್ಲಾ ಮಟ್ಟದ ಕಲೋತ್ಸವದ ಸಾಧಕರು

ಕು.ಅನ್ವಿತಾ.ಎನ್ .ಸಿ.
ಕು.ವೈದೇಹಿ.ಕೆ.   
ಕು.ಶ್ರೀಪ್ರಿಯಾ.ಎಮ್ 
ಕು.ಅಮೃತ ಯು.ಆರ್
ಸುಧಾಸರಸ್ವತಿ ಸಿ.ಎಚ್
ವಿವೇಕ .ಎಸ್ .ಭಟ್

ಕು.ಪೂಜಾ.ಕ
ಕು.ಶ್ರೀನಂದಾ.ಎಮ್




 ಕೊಳತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾಸರಗೋಡು ಉಪ ಜಿಲ್ಲಾ ಮಟ್ಟದ ಸಂಸ್ಕೃತೋತ್ಸವದ ಕವಿತಾರಚೆನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಅನ್ವಿತಾ.ಎನ್ .ಸಿ.  ಉಪ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ,ಕನ್ನಡ ಕಂಠಪಾಠ,ಹಾಗೂ ಸಂಸ್ಕೃತೋತ್ಸವದ ಕಥಾರಚನೆ,ಅಷ್ಟಪದಿಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವೈದೇಹಿ.ಕೆ. ಸಂಸ್ಕೃತೋತ್ಸವದ ಉಪನ್ಯಾಸ ರಚನೆ ,ಸಮಸ್ಯಾಪೂರಣಂ,ಪಾಡಕಂ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಕು.ಶ್ರೀಪ್ರಿಯಾ.ಎಮ್ .    ಕಲೋತ್ಸವದಲ್ಲಿ  ಕನ್ನಡ ಕಥಾರಚನೆ ಹಾಗೂ ಕವಿತಾರಚನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ   ಅಮೃತ ಯು.ಆರ್ .  ಸಂಸ್ಕೃತೋತ್ಸವದ ಪ್ರಭಾಶಣಮ್ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಸುಧಾಸರಸ್ವತಿ ಸಿ.ಎಚ್ .    ಸಂಸ್ಕೃತೋತ್ಸವದ  ಪ್ರಶ್ನೊತ್ತರಿಯಲ್ಲಿ   'ಎ' ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವಿವೇಕ .ಎಸ್ .ಭಟ್ಸಂಸ್ಕೃತೋತ್ಸವದ  ಅಕ್ಷರಶ್ಲೊಕಮ್ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಕು.ಪೂಜಾ.ಕೆ ಸಂಸ್ಕೃತೋತ್ಸವದ ಉಪನ್ಯಾಸ ರಚನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಶ್ರೀನಂದಾ.ಎಮ್.  ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು   ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ನಮ್ಮ ಶಾಲಾ ಪರವಾಗಿ ಅಭಿನಂದನೆಗಳು .









Thursday, June 20, 2019

ವಾಚನ ವಾರ ಆಚರಣೆ

ಎಡನೀರು: ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೂನ್‌ 19 ತಾರೀಕಿನಂದು  ವಾಚನ ವಾರವನ್ನು ಉದ್ಘಾಟಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಮಧುಸೂದನನ್ ಪಿ.ಎನ್ ವರು ಉದ್ಘಾಟಿಸಿದರು. ಪಿ.ಎನ್ ಪಣಿಕ್ಕರ್ ಅವರ ನೆನಪಿನ ಅಂಗವಾಗಿ ಆಚರಿಸುವ ವಾಚನ ವಾರದ ಉದ್ದೇಶವನ್ನು ಮಕ್ಕಳಿಗೆ ತಿಳಿಸಿದರು. ಬಿ .ಆರ್ .ಸಿ. ಕಾಸರಗೋಡಿನ ಪ್ರತಿನಿಧಿಯಾಗಿ ಬಂದಂತಹ ಸುರೇಶ್ ಕುಮಾರ್ ಅವರು ಮಕ್ಕಳಿಗೆ ಓದುವಿನ ಮಹತ್ವ ಹೇಳಿದರು ಹಾಗೆ ಪುಸ್ತಕವನ್ನು   ನೀಡಿದರು..