" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Saturday, February 9, 2019

'ಕಲಿಕೋತ್ಸವ' ನಮ್ಮ ಶಾಲೆಯಲ್ಲಿ

ಎಡೆನೀರು: ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಕೋತ್ಸವ ಇದೇ ಶುಕ್ರವಾರ ಜರಗಿತು. ಚೆಂಗಲ ಪಂಚಾಯತ್ ಉಪಾಧ್ಯಕ್ಷೆಯಾದ ಶ್ರೀಮತಿ ಶಾಂತಕುಮಾರಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ  ವ್ಯಕ್ತಿತ್ವ ಬೆಳವಣಿಗೆಯಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ಹೇಳಿದರು . 7ನೇ ತರಗತಿ ವಿದ್ಯಾರ್ಥಿಗಳು ರಚಿಸಿದ ಇಂಗ್ಲೀಷ್ ಮ್ಯಾಗಜಿನ್ ' ಡ್ರಿಝಿಲ್ 'ನ್ನು  ಶಾಂತಕುಮಾರಿ ಟೀಚರ್ ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲು ರವರು ಅಧ್ಯಕ್ಷರಾಗಿದ್ದರು. ಕಾಸರಗೋಡು ಬಿ.ಆರ್.ಸಿ ಯ  ಸಂಯೋಜಕಿಯಾದ ವೀಣಾ ಕಲಿಕೋತ್ಸವದ ಉದ್ದೇಶಗಳನ್ನು ಹೇಳಿದರು . ಸಹ ಸಂಚಾಲಕರಾದ ಮಧುಸೂಧನನ್ ರವರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಎಸ್.ಎಮ್.ಸಿ  ಸದಸ್ಯರು ,ಪಿ.ಟಿ.ಎ  ,ಎಮ್.ಪಿ.ಟಿ .ಎ ಅಧ್ಯಕ್ಷರು ಹಾಗೂ  ಸದಸ್ಯರೂ ಉಪಸ್ಥಿತರಿದ್ದರು. ಗಣಿತ,ವಿಜ್ಞಾನ, ಭಾಷೆ, ಸಮಾಜ ವಿಜ್ಞಾನ ಹೀಗೆ ಹಲವಾರು ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿನಿ ಅನನ್ಯ ಸಿ.ಎಚ್ ಕಾರ್ಯಕ್ರಮವನ್ನು ನಿರೂಪಿಸಿದಳು. ಪ್ರಜ್ಞಾ ಸ್ವಾಗತಿಸಿ,ವಿದ್ಯಾರ್ಥಿ ಶ್ಯಾಮ ಸುಬ್ರಹ್ಮಣ್ಯ ವಂದಿಸಿದನು.



Thursday, January 31, 2019

ಕಲಿಕೋತ್ಸವ 2018-19

ನಮ್ಮ ಶಾಲೆಯ ಕಲಿಕೋತ್ಸವ 08 ಫೆಬ್ರವರಿ 2019 ರಂದು ನಡೆಸಲು ತೀರ್ಮಾನ ತೆಗೆದುಕೊಳ್ಳುವುದು. ಪಂಚಾಯತ್ ಉಪಾಧ್ಯಕ್ಷೆ  ಶಾಂತ ಕುಮಾರಿಯವರು ಮುಖ್ಯಅತಿಥಿಯಾಗಿ ಭಾಗವಹಿಸುವರು.

Tuesday, October 30, 2018

ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ  

ಹೈಸ್ಕೂಲ್ ಹಾಗೂ ಯುಪಿ ವಿಭಾಗದ ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ   12 ನೇ ತಾರೀಕು ಶಾಲೆಯಲ್ಲಿ ನಡೆಸಲಾಯಿತು.ಪ್ರತ್ಯೇಕವಾಗಿ ಇಪ್ಪತ್ತು ಇಪ್ಪತ್ತರ ಹಾಗೆ ಎರಡು ಗುಂಪುಗಳನ್ನು ಮಾಡಲಾಯಿತು ಒಟ್ಟು 40 ಮಕ್ಕಳನ್ನು ಆಯ್ಕೆ ಮಾಡಲಾಯಿತು.



Tuesday, October 23, 2018

ಶಾಲಾ ಕಲೋತ್ಸವ

ಎಡನೀರು : ನಮ್ಮ ಶಾಲೆಯ ಶಾಲಾ ಕಲೋತ್ಸವ ಇದೇ ತಿಂಗಳ 16 ಹಾಗೂ 20 ನೇ ತಾರೀಕು ನಡೆಯಿತು.ಮುಖ್ಯೋಪಾಧ್ಯಾಯಿನಿ ಶಾರದಾ ಎಡೆಕೋಡ್ಲು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, " ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ  ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಎಂದು ಹೇಳಿದರು. ಸ್ಪರ್ಧಾ ಮನೋಭಾವನೆ ಬೆಳೆಸಲು ಈ ರೀತಿಯ ಕಾರ್ಯಕ್ರಮ ಮಕ್ಕಳಿಗೆ ಒಳ್ಳೆಯ ವೇದಿಕೆ " ಎಂದು ಹೇಳಿದರು.
ಎರಡು ದಿನ ನಡೆದ ಕಲೋತ್ಸವದಲ್ಲಿ ತಿರುವಾದಿರ,ನಾಡ-ನೃತ್ಯ೦,ಭರತನಾಟ್ಯ,ಯಕ್ಷಗಾನ ,ಮೂಕಾಭಿನಯ ,ಮಿಮಿಕ್ರಿ, ಮಾಪಿಳ್ಳೆ ಪಾಟ್ , ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಿತು.  ಸಂಸ್ಕೃತೋತ್ಸವ ಜೊತೆಗೆ ನಡೆಯಿತು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಎಲ್ಲಾ  ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

Tuesday, October 2, 2018

ಅಕ್ಟೋಬರ್ 2 ಗಾಂಧಿ ಜಯಂತಿ

ಎಡನೀರು: ಅಕ್ಟೋಬರ್ 2 ಗಾಂಧಿ ಜಯಂತಿಯನ್ನು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜೃಂಭಣೆಯಿಂದ  ಆಚರಿಸಲಾಯಿತು. ಬೆಳಗ್ಗೆ 9:30ಕ್ಕೆ ಸರಿಯಾಗಿ ಸಭೆ ಸೇರಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶಾರದ ಅಡೆಕೋಡ್ಲುರವರು  ಶಾಲಾ ಪರಿಸರ ಸ್ವಚ್ಛವಾಗಿಟ್ಟುಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಹಾಗೂ ಗಾಂಧಿ ತತ್ವ ನಮಗೆಲ್ಲಾ ಅನುಕರಣೀಯ ಎಂದು ಹೇಳಿದರು. ನಂತರ ಶಾಲಾ ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದ ಮಾರ್ಗದರ್ಶನದಲ್ಲಿ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛ ಗೊಳಿಸಿದರು. ಕೊನೆಯಲ್ಲಿ ಲಘು ಉಪಹಾರ ಹಾಗೂ ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು.

Friday, September 14, 2018

ಲಿಟ್ಲ್ ಕೈಟ್ಸ್ ಏಕದಿನ ಶಿಬಿರ




 

ಎಡನೀರು:ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಾರೀಕು 04-08-2018 ರಂದು ಲಿಟ್ಲ್ ಕೈಟ್ಸ್ ನ ಶಾಲಾ ಮಟ್ಟದ ಶಿಬಿರವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಾರದಾ ಅಡೆಕೋಡ್ಲುರವರು ಉದ್ಘಾಟಿಸಿದರು.ಒಟ್ಟಾಗಿ 21 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.ಭಾರತಿ ಟೀಚರ್ ಹಾಗೂ ರಾಮಮೋಹನ ಕೆದಿಲ್ಲಾಯರು ಈ ಶಿಬಿರದ ಸಂಪೂರ್ಣ ನೇತೃತ್ವವನ್ನು ವಹಿಸಿದ್ದರು. ಶಿಬಿರದಲ್ಲಿ ಭಾರತಿ ಟೀಚರ್ ರವರು ಒಂದು ಎನಿಮೇಶನ್ ವೀಡಿಯೋವನ್ನು ಹೇಗೆ ಎಡಿಟ್ ಮಾಡಬಹುದು ಎಂದು ತಿಳಿಸಿಕೊಟ್ಟರು.ಮಾತ್ರವಲ್ಲದೇ ವೀಡಿಯೋಗೆ ಹೇಗೆ ಧ್ವನಿಯನ್ನು ಸೇರಿಸಬಹುದೆಂದುತಿಳಿಸಿದರು.
ಸರಿಸುಮಾರು 11.00 ಗಂಟೆಗೆ ಲಘು ಉಪಹಾರವನ್ನು ವಿತರಿಸಿದರು.ತದನಂತರ ಲಿಟ್ಲ್ ಕೈಟ್ಸ್ ನ ಉಳಿದ ಚಟುವಟಿಕೆಗಳನ್ನು ಮಾಡಲಾಯಿತು. ಭೋಜನವು ರುಚಿಕರವಾಗಿತ್ತು.ಭೋಜನದನಂತರ ಭಾರತಿ ಟೀಚರವರು ಲಿಟ್ಲ್ ಕೈಟ್ಸ್ ನ ಬಾಕಿ ಉಳಿದ ಚಟುವಟಿಕೆಗಳನ್ನು ಪ್ರಾರಂಭಿಸಿದರು.ಮಧ್ಯಾಹ್ನದ ನಂತರ ಓಪನ್ ಶೋಟ್ ವೀಡಿಯೋ ಎಡಿಟರ್ ಎಂಬ ಸೋಫ್ಟ್ ವೇರ್ ನಲ್ಲಿ ತಯಾರಿಸಿದ ಒಂದು ಎನಿಮೇಶನ್ ವೀಡಿಯೋಗೆ ಶೀರ್ಷಿಕೆ ನೀಡಲಾಯಿತು.ಪ್ರತಿಯೋರ್ವ ವಿದ್ಯಾರ್ಥಿಯೂ ಸಹ ತಮ್ಮ ತಮ್ಮ ಎನಿಮೇಶನ್ ವೀಡಿಯೋಗೆ ಶೀರ್ಷಿಕೆಯನ್ನು ನೀಡಿದರು.ತದನಂತರ ಎನಿಮೇಶನ್ ವೀಡಿಯೋವನ್ನು ಎಕ್ಸ್ ಪೋರ್ಟ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ವೀಡಿಯೋವನ್ನು ಎಕ್ಸ್ ಪೋರ್ಟ್ ಮಾಡುವುದರೊಂದಿಗೆ ಲಿಟ್ಲ್ ಕೈಟ್ಸ್ ನ ಶಾಲಾ ಮಟ್ಟದ ಶಿಬಿರವು ಮುಕ್ತಾಯಗೊಂಡಿತು.ಕೊನೆಯಲ್ಲಿ ಕೆಲವು ವಿದ್ಯಾರ್ಥಿಗಳು ಈ ಶಿಬಿರದ ಕುರಿತಾದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಸಂಜೆಯೂ ಸಹ ವಿದ್ಯಾರ್ಥಿಗಳಿಗೆ ಲಘು ಉಪಹಾರವನ್ನು ವಿತರಿಸಲಾಯಿತು.
ಒಟ್ಟಿನಲ್ಲಿ ಈ ಶಿಬಿರದಿಂದ  ಹಲವಾರು ಸೋಫ್ಟ್ ವೇರ್ ಗಳನ್ನು ಪರಿಚಯಿಸಲು ಸಾಧ್ಯವಾಗಿದೆ.ಮಾತ್ರವಲ್ಲದೇ ಒಂದು ವೀಡಿಯೋವನ್ನು ಯಾವ ರೀತಿಯಲ್ಲಿ ಎಡಿಟ್ ಮಾಡಬಹುದು,ಯಾವ ರೀತಿಯಲ್ಲಿ ಆ ವೀಡಿಯೋಗೆ ಶಬ್ದವನ್ನು ನೀಡಬಹುದು ಎಂಬುದನ್ನು ತಿಳಿಯಲು ಸಾಧ್ಯವಾಗಿದೆ.ಇದಲ್ಲದೇ ಪ್ರತಿಯೊಂದು ಸೋಫ್ಟ್ ವೇರ್ ನಲ್ಲಿರುವ ವಿವಿಧ ರೀತಿಯ ಟೂಲುಗಳನ್ನು ಪರಿಚಯಿಸಿಕೊಳ್ಳಲು ಈ ಶಿಬಿರವು ಸಹಾಯಕವಾಗಿದೆ.


Monday, August 27, 2018

ಸ್ವಾತಂತ್ರ್ಯ ದಿನ ಆಚರಣೆ

ಎಡನೀರು: ಅಗೋಸ್ತು 15 ರಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಬ್ರಮದಲ್ಲಿ ಆಚರಣೆ ಮಾಡಲಾಯಿತು.ಬೆಳಗ್ಗೆ ವರುಣನ ಅಡಚಣೆ ಇದ್ದರೂ, 9:40 ಕ್ಕೆ ಸರಿಯಾಗಿ ಧ್ವಜಾರೋಹಣವನ್ನು ನಮ್ಮ ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ನಾರಾಯಣ್ ರವರು ನಡೆಸಿ ಮಕ್ಕಳಿಗೆ ಹಿತವಚನವನ್ನು ಹೇಳಿದರು. ಗೌರವಾನ್ವಿತ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲುರವರು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವಲ್ಲಿ ಯಶಸ್ವಿಯಾದರು.
       ನಂತರ ನಡೆದ ಭಾಷಣ,  ಪ್ರಬಂಧ,ಸ್ವಾತಂತ್ರ್ಯ ದಿನಾಚರಣಾ ರಸಪ್ರಶ್ನೆ ,ದೇಶಭಕ್ತಿ ಹಾಡಿನ ಸ್ಪರ್ಧೆಗಳಲ್ಲಿ ಮಕ್ಕಳು ಆಸಕ್ತಿ ಯಿಂದ ಭಾಗವಹಿಸಿದರು.ಕಾರ್ಯಕ್ರಮದ  ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಎಲ್ಲರಿಗೂ ಸಿಹಿತಿಂಡಿ ವಿತರಿಸಿ,12:30 ಕ್ಕೆ  ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.