" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, October 10, 2017

ಶಾರದಾ ಪೂಜೆ

ಎಡನೀರು: ಸ್ವಾಮೀಜೀಸ್  ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಶಾರದಾ ಪೂಜೆ ಜರಗಿತು.ಶಿಕ್ಷ ಕರು ,ಶಿಕ್ಷ ಕಿಯರೂ ಹಾಗೂ ಮಕ್ಕಳು ಭಜನೆ ಹಾಡಿದರು.ನಂ ತರ ಮಕ್ಕಳಿಗೆ ಪುಸ್ತಕ  ಓದಿಸಲಾಯಿತು.

Monday, October 9, 2017

ಶಾಲಾ ಕಲೋತ್ಸವ




ಎಡನೀರು :ಸ್ವಾಮೀಜೀಸ್ ಹೈಸ್ಕೂಲ್ ಎಡನೀರಿ ನಲ್ಲಿ ಅಕ್ಟೋಬರ್ 5ಮತ್ತು 6ನೇ ತಾರೀಕಿನಂದು ಶಾಲಾ ಕಲೋ ತ್ಸ್ ವವು ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಯವರಾದ ಶಾರದಾ ಅಡೆಕೋಡ್ಲು  ಶುಭ ಹಾರೈಸಿದರು . ನಂತರ ಭಾವಗೀತೆ ,ಗಾನ ಮೇಳ,ಮಿಮಿಕ್ರಿ ,ಒಪ್ಪನ ,ಸಂಘ ಗಾನ ,ನಾಟಕಸ್ಪರ್ಧೆಗಳು ನಡೆದವು .ವಿದ್ಯಾ ರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು .


Tuesday, October 3, 2017

ನಮ್ಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಎಡನೀರು: ಅಕ್ಟೋಬರ್ 2 ಸೋಮವಾರದಂದು ಗಾಂಧಿ ಜಯಂತಿಯನ್ನು  ಆಚರಿಸಲಾಯಿತು. ಬೆಳಗ್ಗೆ  ಶಾಲಾ  ಅಸ್ಸೆಂಬ್ಲಿ ನಡೆಸಲಾಯಿತು. ಹಿರಿಯ ಶಿಕ್ಷಕರಾದ ಮಧುಸೂಧನನ್ ರವರು ಮಕ್ಕಳನ್ನುದ್ದೇಶಿಸಿ ಮಾತನಾಡಿ ಗಾಂಧಿ ವಾದದ  ಪ್ರಮುಖ ಆಶಯವಾದ  ಶಾಲಾ ಪರಿಸರ ದ ಸ್ವಚ್ಛತೆಯ ಬಗ್ಗೆ  ಮಾತನಾಡಿದರು. ನಂತರ ಮಕ್ಕಳು  ಶಾಲಾ ಪರಿಸರವನ್ನು ಸ್ವಚ್ಛ ಗೊಳಿಸಿದರು. ಮಕ್ಕಳಿಗೆ  ಲಘು ಉಪಹಾರವನ್ನು ಕೊಡಲಾಯಿತು.

Friday, September 29, 2017

ಕ್ಲಾಸ್ ಪಿ.ಟಿ.ಎ ಸಭೆ- ವಿದ್ಯಾರ್ಥಿಗಳ ಸಾಧನೆಯನ್ನು ಪರಿಶೀಲಿಸಿದ ಪೋಷಕರು

ಎಡನೀರು: ಮಗುವಿನ ಸರ್ವತೋಮುಖ ವಿಕಾಸದ ಮಂದಿರ ಎಂದರೆ ಶಾಲೆ,  ಶಾಲೆಯಲ್ಲಿ  ಮಗುವಿನ ಕಲಿಕೆ ಯಶಸ್ವಿಯಾಗಿ ಸಾಗಲು ಮನೆಯ  ಪರಿಸರ ಹಾಗೂ  ಪೋಷಕರ ಸ್ಥಿತಿ ಅವರ ಪ್ರೋತ್ಸಾಹ ಕೂಡ ಅಗತ್ಯ.       ತಮ್ಮ ತಮ್ಮ ಮಕ್ಕಳ  ಶೈಕ್ಷಣಿಕ ಪ್ರಗತಿಯ ಕುರಿತ   ಚರ್ಚೆ ನಡೆಸುವ ಸಲುವಾಗಿ  ಕ್ಲಾಸ್  ಪಿ. ಟಿ.ಎ  ಸಭೆಯನ್ನು ಕರೆಯಲಾಗಿತ್ತು. ಈ ಸಲದ ಕಾಲು ವಾರ್ಷಿಕ ಪರೀಕ್ಷೆಯ ಪಲಿತಾಂಶದ ಆಧಾರದಲ್ಲಿ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಪೋಷಕರಲ್ಲಿ ಸಮಾಲೋಚನೆ ನಡೆಸಿದರು. 10ನೇ ತರಗತಿಯ ಪಿ. ಟಿ.ಎ ಸಭೆ 26ನೇ ತಾರೀಕು ಮಂಗಳವಾರ  ಹಾಗೂ  9ನೇ ತರಗತಿ ಪಿ. ಟಿ.ಎ ಸಭೆ 27ನೇ ತಾರೀಕು,ಹಾಗೇ  8 ಹಾಗೂ 7-5 ತರಗತಿಯ ಪಿ. ಟಿ.ಎ ಸಭೆ 28ನೇ ಗುರುವಾರ  ಸಂಜೆ 3:30 ರ ನಂತರ ನಡೆಯುತು. ಈ ಸಭೆಯಲ್ಲಿ  ರೋಬೆಲ್ಲಾ ರೋಗಕ್ಕೆ ಹಾಕುವ ಲಸಿಕೆಯ ಕುರಿತಂತೆ ಪೋಷಕರಿಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರಿ ವೈದ್ಯರು  ಭಾಗವಹಿದ್ದರು.
               

ದಸರಾ ಹಬ್ಬದ ಪ್ರಯುಕ್ತ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರು

ಕಾಸರಗೋಡು: ದಸರಾ ಹಬ್ಬದ ಪ್ರಯುಕ್ತ  ಕಾಸರಗೋಡು  ಸರ್ಕಾರಿ ಕಾಲೇಜಿನಲ್ಲಿ  ಹೈಸ್ಕೂಲ್ ಶಾಲಾ  ಮಟ್ಟದಲ್ಲಿ ನಡೆದ  ವಿವಿಧ ಸ್ಪರ್ದೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಭಾಷಣ ಸ್ಪರ್ದೆಯಲ್ಲಿ  10ನೇ ಕ್ಲಾಸ್ ನ ವೀಣಾಸುಮತಿ, ಕವಿತಾರಚನೆಯಲ್ಲಿ 10ನೇ ತರಗತಿಯ ಅಂಬಿಕ , ಹಾಗೂ ಭಾವಗೀತೆ ಸ್ಪರ್ದೆಯಲ್ಲಿ  8ನೇ ತರಗತಿಯ ವೈಧೇಹಿ ಪ್ರೋತ್ಸಾಹಕ ಬಹುಮಾನ ಗಳಿಸಿದರು.  ಈ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ-ರಕ್ಷಕ  ಸಭೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ ಶಾರದಾ ಎಡೆಕೋಡ್ಲುರವರು ಅಭಿನಂದಿಸಿದರು.

Thursday, September 28, 2017

ಮಕ್ಕಳಿಗೆ ಕೋಳಿ ವಿತರಣೆ

ಎಡನೀರು: ನಮ್ಮ ಶಾಲೆಯ 50 ಮಕ್ಕಳಿಗೆ  ತಲಾ 5 ಕೋಳಿ ಮರಿಗಳನ್ನು  ವಿತರಣೆ  ಮಾಡಲಾಯಿತು. ನಮ್ಮ ಪಂಚಾಯತ್  ಅಧ್ಯಕ್ಷೆ  ಸಾಹಿನ ಸಲೀಮ್  ಮಕ್ಕಳಿಗೆ ಕೋಳಿಮರಿಗಳನ್ನು ವಿತರಿಸುವುದರ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.ಹಾಗೂ ಈ ಕಾರ್ಯಕ್ರಮದ  ಯೋಜನೆಯ ಸಮಗ್ರ ಪರಿಚಯ ಮಾಡಿಕೊಟ್ಟರು. ಮುಖ್ಯೋಪಾಧ್ಯಾಯಿನಿ  ಶಾರದ ಎಡಕೋಡ್ಲು ರವರು ಮಕ್ಕಳಿಗೆ  ಈ ರೀತಿಯ  ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸುವ ಯೋಜನೆಯ ಬಗ್ಗೆ ಮಾತನಾಡಿ ವೈಯುಕ್ತಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಈ ರೀತಿಯ  ಕಾರ್ಯಕ್ರಮ ಹೇಗೆ ಸಹಕಾರಿ ಎಂದು ಹೇಳಿದರು. ಪಂಚಾಯತ್ ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್  ಸಭೆಯಲ್ಲಿ ಉಪಸ್ಥಿತರಿದ್ದರು.

Tuesday, August 15, 2017

71 ನೇ ಸ್ವಾತಂತ್ರ್ಯ ದಿನೋತ್ಸವ ಆಚರಣೆ

ಎಡನೀರು: 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಬೆಳಗ್ಗೆ 9:30 ಕ್ಕೆ ಸರಿಯಾಗಿ ದ್ವಜಾರೋಹಣವನ್ನು ಶಾಲಾ ಪ್ರಾಂಶುಪಾಲರಾದ ನಾರಾಯಣ ರವರು ನೆರವೇರಿಸಿದರು.ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲು ರವರು ಸ್ವಾತಂತ್ರ್ಯದಿನಾಚರಣೆಯ ಬಗ್ಗೆ ಮಾತನಾಡಿದರು. ನಂತರ ನಡೆದ  ಕಾರ್ಯಕ್ರಮದಲ್ಲಿ ಭಾಷಣ, ದೇಶಭಕ್ತಿ ಗೀತೆ ಸ್ಪರ್ದೆಗಳು ನಡೆದವು. ಮುಖ್ಯೋಪಾಧ್ಯಾಯಿನಿಯವರು ಸ್ವಾತಂತ್ರ್ಯದಿನಾಚರಣೆಯ ಆಂಗವಾಗಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿದರು.  ಸಂಸ್ಕ್ರತ ಸ್ಕೋಲರ್ ಶಿಪ್ ಲಭಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. 7 ನೇ ತರಗತಿಯ ವಿದ್ಯಾರ್ಥಿಗಳ  " ಸೇವ್ ಪ್ಲಾನೆಟ್ ಅರ್ಥ್" ಎಂಬ  ಇಂಗ್ಲೀಷ್  ಮ್ಯಾಗಜ಼ೀನ್ ನ್ನು ಮುಖ್ಯೋಪಾಧ್ಯಾಯಿನಿಯವರು ಬಿಡುಗಡೆ  ಗೊಳಿಸಿದರು.ನಂತರ ಮಕ್ಕಳ   ಈ ಕಾರ್ಯವನ್ನು ಪ್ರಶಂಸಿಸಿದರು. ಈ ಕಾರ್ಯಕ್ರಮವನ್ನು  ಸಮಾಜ ವಿಜ್ಞಾನ ಅದ್ಯಾಪಕರಾದ ರಾಮಮೋಹನ ರವರು ನಿರೂಪಿಸಿದರು.