" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Friday, October 10, 2014

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಕ್ಕಳ ಪರಿಸರ ಕಾಳಜಿಯನ್ನು ಗುರುತಿಸುವ ಸಲುವಾಗಿ ಶಾಲಾ ಪ್ರಾಥಮಿಕ ಮಟ್ಟದಲ್ಲಿ ಹಲವು ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು .... ಮಕ್ಕಳಿಗೋಸ್ಕರ ಪರಿಸರಗೀತೆ ,ಪರಿಸರ ಸಂಬಂಧಿತ ಪ್ರಬಂಧ ,ಹಾಗೂ ಪ್ರಕೃತಿ ಗೆ ಸಂಬಂಧಪಟ್ಟಂತೆ ನೆನಪಿನಶಕ್ತಿ ಪರೀಕ್ಷಿಸುವ  ಸ್ಪರ್ಧೆಯನ್ನೂ ಶಾಲಾ ವತಿಯಿಂದ ನಡೆಸಲಾಯಿತು .......




conducting memory test through leaves.....



Standard Ten Enrichment Programme held on 10-10-2014

ನಮ್ಮ ಶಾಲಾ ಹತ್ತನೇ ತರಗತಿಯ ಮಕ್ಕಳಿಗಾಗಿ ನಡೆಸಿದ " ಮೋಟಿವೇಷನ್" ತರಗತಿಯನ್ನು ದಿನಾoಕ 10/10/14 ರಂದು ನಡೆಸಲಾಯಿತು. ಬೆಳಗ್ಗಿನಿಂದ ಮಧ್ಯಾಹ್ನದ ತನಕ ವಿವಿಧ ವಿಷಯಗಳ ಕುರಿತು ನುರಿತ  ಅದ್ಯಾಪಿಕೆಯರಾದ  ಶ್ರೀಮತಿ ಶಾOತಾಕುಮಾರಿ ( H.S.A., G.H.S.S. Kumbla), ಹಾಗೂ ಶ್ರೀಮತಿ ವಸಂತಿ (H.S.A.,G.H.S.S.Chandragiri) ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯಿನಿಯರಾದ  ಶ್ರೀಮತಿ ಶಾರದಾ ಎ, ಸ್ವಾಗತಿಸಿ , ಕ್ಲಾಸ್ ಶಿಕ್ಷಕಿಯರಲ್ಲಿ  ಒಬ್ಬರಾದ  ಶ್ರೀಮತಿ  ಜ್ಯೋತಿಲಕ್ಷ್ಮೀ ಯವರು ವಂದಿಸಿದರು.


                                      


Tuesday, October 7, 2014

ವನ್ಯಜೀವಿ ವಾರಾಚರಣೆ ಅಂಗವಾಗಿಒಕ್ಟೋಬರ್ ತಿಂಗಳ  ೧,೩ನೇ ತಾರೀಕಿನಂದು   ಕಾಸರಗೋಡು ಆರಣ್ಯ ಇಲಾಖೆಯವರು ಏರ್ಪಡಿಸಿದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಕ್ಕಳ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ಹತ್ತನೇ ತರಗತಿಯ ವಿಧ್ಯಾರ್ಥಿನಿ ಅನಘಾ . ಎ 

Saturday, October 4, 2014

                                    ಶಾರದಾ ಪೂಜೆ 
ನಮ್ಮ ಶಾಲೆಯಲ್ಲಿ ಅಕ್ಟೋಬರ್ ೩ನೇ ತಾರೀಕು ಶುಕ್ರವಾರ ಶಾರದಾ ಪೂಜೆ ಜರಗಿತು . ಮಕ್ಕಳು ಹಾಗೂ ಅಧ್ಯಾಪಕ ,ಸಿಬ್ಬಂಧಿ ವರ್ಗದವರು  ಭಜನೆಯಲ್ಲಿ ಪಾಲ್ಗೊಂಡರು
ಗಾಂಧಿ ಜಯಂತಿ ಆಚರಣೆ  
 

 ಅಕ್ಟೋಬರ್ ೨ನೇ ತಾರೀಕು ಗುರುವಾರ ನಮ್ಮ ಶಾಲೆಯಲ್ಲಿ  ಗಾಂಧೀಜಯಂತಿ ಆಚರಿಸಲಾಯಿತು. ಶಾಲಾ ಅಸ್ಸೆಂಬ್ಲಿಯಲ್ಲಿ ಮುಖ್ಯ ಶಿಕ್ಷಕಿಯವರು  ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು ಗಾಂಧೀಜಿಯವರ ಆದರ್ಶಜೀವನದ ಕಿರುಪರಿಚಯವನ್ನು  ಮಕ್ಕಳಿಗೆ ನೀಡಿದರು .ಬಳಿಕ ರಕ್ಷಕ-ಶಿಕ್ಷಕ ಸಂಘದ ಅದ್ಯಕ್ಷರಾದ ವಿಷ್ಣುಮೂರ್ತಿ ಕಕ್ಕಿಲ್ಲಾಯರು ಈ ದಿನದ ಮಹತ್ವವನ್ನು ವಿವರಿಸಿದರು.ಅಧ್ಯಾಪಕರಾದ ಮಧುಸೂಧನನ್ ರವರು ಸ್ವಚ್ಚತಾಪ್ರತಿಜ್ಞೆಯನ್ನು ಬೋಧಿಸಿದರು,ನಂತರ ಮಕ್ಕಳು ಶಾಲಾ ಪರಿಸರವನ್ನು ಅಧ್ಯಾಪಕರ ಸಹಕಾರದೊಂದಿಗೆ  ಶುಚಿಗೊಳಿಸಿದರು ......  



ಮಕ್ಕಳು ಶಾಲಾ ಪರಿಸರ ವನ್ನು ಸ್ವಚ್ಛಗೊಳಿಸಿದರು 


Thursday, October 2, 2014


30/09/2014 ನೇ ಮಂಗಳವಾರ ನಮ್ಮ ಶಾಲೆಯ ಹತ್ತನೇ ತರಗತಿ ಪಿ. ಟಿ.ಎ ಸಮಾಲೋಚನಾ ಸಭೆ ನಡೆಯಿತು. ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಈಗಲೇ ತಯಾರಿ ನಡೆಸಲು ಸೂಚಿಸಲಾಯಿತು. ಹಾಗೆಯೇ ಪೋಷಕರು ತಮ್ಮ ಮಕ್ಕಳ ಕಾಲುವಾಷಿ೯ಕ ಪರೀಕ್ಷೆಯ ಪ್ರಗತಿ ಪರಿಶೀಲಿಸಿದರು....