" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Friday, October 27, 2017

ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ದ್ವಿತೀಯ....

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ ಶಾಸ್ತ್ರ ಮೇಳದಲ್ಲಿ ಹೈಸ್ಕೂಲ್   ವಿಭಾಗದ ಐ .ಟಿ  ರಸಪ್ರಶ್ನೆ ಸ್ಪರ್ಧೆಯಲ್ಲಿ   ವಿವೇಕ ಎಸ್.  ಭಟ್   'ಎ ' ಗ್ರೇಡಿನೊಂದಿಗೆ ದ್ವಿತೀಯ  ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆಯಾಗಿದ್ದಾನೆ . ಈತ  ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿ. ಈತ ಎಡನೀರಿನ  ಕಳೇರಿ  ಡಾ . ಸುಬ್ರಹ್ಮಣ್ಯ ಭಟ್ ಹಾಗೂ  ಸರೋಜ ದಂಪತಿಯವರ ಸುಪುತ್ರ.

ಉಪ ಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ಪ್ರಥಮ

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ ಶಾಸ್ತ್ರಮೇಳದಲ್ಲಿ ಹೈಸ್ಕೂಲ್   ವಿಭಾಗದ ವೇಸ್ಟ್ ಮೆಟೀರಿಯಲ್ ಪ್ರೊಡೆಕ್ಟ್ಸ್ ಸ್ಪರ್ಧೆಯಲ್ಲಿ  ಕು . ಶ್ರೀಪ್ರಿಯ  ಎಮ್   'ಎ ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ   ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿನಿ.  ಅಧ್ಯಾಪಕರಾದ ಮಧುಸೂದನನ್ ಪಿ .ಯನ್  ಹಾಗೂ ರಾಜೇಶ್ವರಿ ಇವರ ಸುಪುತ್ರಿ. 

Tuesday, October 10, 2017

ಶಾರದಾ ಪೂಜೆ

ಎಡನೀರು: ಸ್ವಾಮೀಜೀಸ್  ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಶಾರದಾ ಪೂಜೆ ಜರಗಿತು.ಶಿಕ್ಷ ಕರು ,ಶಿಕ್ಷ ಕಿಯರೂ ಹಾಗೂ ಮಕ್ಕಳು ಭಜನೆ ಹಾಡಿದರು.ನಂ ತರ ಮಕ್ಕಳಿಗೆ ಪುಸ್ತಕ  ಓದಿಸಲಾಯಿತು.

Monday, October 9, 2017

ಶಾಲಾ ಕಲೋತ್ಸವ




ಎಡನೀರು :ಸ್ವಾಮೀಜೀಸ್ ಹೈಸ್ಕೂಲ್ ಎಡನೀರಿ ನಲ್ಲಿ ಅಕ್ಟೋಬರ್ 5ಮತ್ತು 6ನೇ ತಾರೀಕಿನಂದು ಶಾಲಾ ಕಲೋ ತ್ಸ್ ವವು ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಯವರಾದ ಶಾರದಾ ಅಡೆಕೋಡ್ಲು  ಶುಭ ಹಾರೈಸಿದರು . ನಂತರ ಭಾವಗೀತೆ ,ಗಾನ ಮೇಳ,ಮಿಮಿಕ್ರಿ ,ಒಪ್ಪನ ,ಸಂಘ ಗಾನ ,ನಾಟಕಸ್ಪರ್ಧೆಗಳು ನಡೆದವು .ವಿದ್ಯಾ ರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು .


Tuesday, October 3, 2017

ನಮ್ಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಎಡನೀರು: ಅಕ್ಟೋಬರ್ 2 ಸೋಮವಾರದಂದು ಗಾಂಧಿ ಜಯಂತಿಯನ್ನು  ಆಚರಿಸಲಾಯಿತು. ಬೆಳಗ್ಗೆ  ಶಾಲಾ  ಅಸ್ಸೆಂಬ್ಲಿ ನಡೆಸಲಾಯಿತು. ಹಿರಿಯ ಶಿಕ್ಷಕರಾದ ಮಧುಸೂಧನನ್ ರವರು ಮಕ್ಕಳನ್ನುದ್ದೇಶಿಸಿ ಮಾತನಾಡಿ ಗಾಂಧಿ ವಾದದ  ಪ್ರಮುಖ ಆಶಯವಾದ  ಶಾಲಾ ಪರಿಸರ ದ ಸ್ವಚ್ಛತೆಯ ಬಗ್ಗೆ  ಮಾತನಾಡಿದರು. ನಂತರ ಮಕ್ಕಳು  ಶಾಲಾ ಪರಿಸರವನ್ನು ಸ್ವಚ್ಛ ಗೊಳಿಸಿದರು. ಮಕ್ಕಳಿಗೆ  ಲಘು ಉಪಹಾರವನ್ನು ಕೊಡಲಾಯಿತು.

Friday, September 29, 2017

ಕ್ಲಾಸ್ ಪಿ.ಟಿ.ಎ ಸಭೆ- ವಿದ್ಯಾರ್ಥಿಗಳ ಸಾಧನೆಯನ್ನು ಪರಿಶೀಲಿಸಿದ ಪೋಷಕರು

ಎಡನೀರು: ಮಗುವಿನ ಸರ್ವತೋಮುಖ ವಿಕಾಸದ ಮಂದಿರ ಎಂದರೆ ಶಾಲೆ,  ಶಾಲೆಯಲ್ಲಿ  ಮಗುವಿನ ಕಲಿಕೆ ಯಶಸ್ವಿಯಾಗಿ ಸಾಗಲು ಮನೆಯ  ಪರಿಸರ ಹಾಗೂ  ಪೋಷಕರ ಸ್ಥಿತಿ ಅವರ ಪ್ರೋತ್ಸಾಹ ಕೂಡ ಅಗತ್ಯ.       ತಮ್ಮ ತಮ್ಮ ಮಕ್ಕಳ  ಶೈಕ್ಷಣಿಕ ಪ್ರಗತಿಯ ಕುರಿತ   ಚರ್ಚೆ ನಡೆಸುವ ಸಲುವಾಗಿ  ಕ್ಲಾಸ್  ಪಿ. ಟಿ.ಎ  ಸಭೆಯನ್ನು ಕರೆಯಲಾಗಿತ್ತು. ಈ ಸಲದ ಕಾಲು ವಾರ್ಷಿಕ ಪರೀಕ್ಷೆಯ ಪಲಿತಾಂಶದ ಆಧಾರದಲ್ಲಿ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಪೋಷಕರಲ್ಲಿ ಸಮಾಲೋಚನೆ ನಡೆಸಿದರು. 10ನೇ ತರಗತಿಯ ಪಿ. ಟಿ.ಎ ಸಭೆ 26ನೇ ತಾರೀಕು ಮಂಗಳವಾರ  ಹಾಗೂ  9ನೇ ತರಗತಿ ಪಿ. ಟಿ.ಎ ಸಭೆ 27ನೇ ತಾರೀಕು,ಹಾಗೇ  8 ಹಾಗೂ 7-5 ತರಗತಿಯ ಪಿ. ಟಿ.ಎ ಸಭೆ 28ನೇ ಗುರುವಾರ  ಸಂಜೆ 3:30 ರ ನಂತರ ನಡೆಯುತು. ಈ ಸಭೆಯಲ್ಲಿ  ರೋಬೆಲ್ಲಾ ರೋಗಕ್ಕೆ ಹಾಕುವ ಲಸಿಕೆಯ ಕುರಿತಂತೆ ಪೋಷಕರಿಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರಿ ವೈದ್ಯರು  ಭಾಗವಹಿದ್ದರು.
               

ದಸರಾ ಹಬ್ಬದ ಪ್ರಯುಕ್ತ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರು

ಕಾಸರಗೋಡು: ದಸರಾ ಹಬ್ಬದ ಪ್ರಯುಕ್ತ  ಕಾಸರಗೋಡು  ಸರ್ಕಾರಿ ಕಾಲೇಜಿನಲ್ಲಿ  ಹೈಸ್ಕೂಲ್ ಶಾಲಾ  ಮಟ್ಟದಲ್ಲಿ ನಡೆದ  ವಿವಿಧ ಸ್ಪರ್ದೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಭಾಷಣ ಸ್ಪರ್ದೆಯಲ್ಲಿ  10ನೇ ಕ್ಲಾಸ್ ನ ವೀಣಾಸುಮತಿ, ಕವಿತಾರಚನೆಯಲ್ಲಿ 10ನೇ ತರಗತಿಯ ಅಂಬಿಕ , ಹಾಗೂ ಭಾವಗೀತೆ ಸ್ಪರ್ದೆಯಲ್ಲಿ  8ನೇ ತರಗತಿಯ ವೈಧೇಹಿ ಪ್ರೋತ್ಸಾಹಕ ಬಹುಮಾನ ಗಳಿಸಿದರು.  ಈ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ-ರಕ್ಷಕ  ಸಭೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ ಶಾರದಾ ಎಡೆಕೋಡ್ಲುರವರು ಅಭಿನಂದಿಸಿದರು.