" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Thursday, February 12, 2015

ಎ ಸ್ಸಿ ಮಕ್ಕಳಿಗೆ ಮೇಜು ಹಾಗೂ ಕುರ್ಚಿ ವಿತರಣೆ ......

10-02-2015 ನೇ ಮಂಗಳವಾರ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಶಾಲೆಯ 8,9 ಹಾಗೂ 10ನೇ  ತರಗತಿಯಲ್ಲಿ ಕಲಿಯುತ್ತಿರುವ  36  ಎಸ್ಸಿ (SC) ಮಕ್ಕಳಿಗೆ ಮೇಜು ಹಾಗೂ ಕುರ್ಚಿಯನ್ನು ವಿತರಿಸಲಾಯಿತು ...ಮೊದಲು ನಡೆದ ಸಭೆಯಲ್ಲಿ ಹಿರಿಯ ಅಧ್ಯಾಪಿಕೆ ಶಾಂತ ಕುಮಾರಿ ಟೀಚರ್  ಎಲ್ಲರನ್ನು ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಸಕಿಯವರು ಪಂಚಾಯತ್ ನ ಈ ಯೋಜನೆಯನ್ನು ಶ್ಲಾಘಿಸಿದರು..ಸಭೆಯಲ್ಲಿ ಶಾಲಾ ಪಿ .ಟಿ .ಎ  ಅಧ್ಯಕ್ಷರು ,ಎಸ್. ಅರ್ . ಜಿ ಸಂಚಾಲಕರು ,ಎಲ್ಲಾ ಶಿಕ್ಷಕರು, ಸಿಬ್ಬಂಧಿವರ್ಗ, ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು ... 





"ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ"

10-02-2015 ನೇ  ಮಂಗಳವಾರ  ಕೇರಳ ಅರಣ್ಯ ಹಾಗೂ ವನ್ಯಮೃಗ ಸಂರಕ್ಷಣಾ  ಇಲಾಖೆಯ ವತಿಯಿಂದ " ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ" ಎಂಬ ವಿಷಯದ ಕುರಿತು ಮಕ್ಕಳಿಗೆ  ವಿಚಾರ ಗೋಷ್ಠಿ ಯನ್ನು ಹಮ್ಮಿ ಕೊಳ್ಳಲಾಯಿತು... ಈ  ವಿಚಾರ ಗೋಷ್ಠಿಯಲ್ಲಿ  ಜಿಲ್ಲಾ ಅರಣ್ಯಾಧಿಕಾರಿ ಶ್ರೀ ಮುರಳೀಧರನ್ ರವರು ಹಾಜರಿದ್ದು ,ಸಂಪನ್ಮೂಲ ವ್ಯಕ್ತಿ ಶ್ರೀ ಭಾಸ್ಕರ ಬೆಳ್ಳೂರು ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು..





Tuesday, January 20, 2015


20-01-2015 : -ರಾಜ್ಯ ದಲ್ಲಿ ನಡಯುವ ರಾಷ್ಟ್ರೀಯ  ಕ್ರೀಡಾ ಕೂಟಕ್ಕೆ  ಉತ್ತೇಜನ ಸಂದೇಶ  ಹಾಗೂ ಪ್ರಚಾರ  ನೀಡುವ ಉದ್ದೇಶದಿಂದ ನಮ್ಮ ಶಾಲಾ ಮಕ್ಕಳು ಇಂದು  ಬೆಳಗ್ಗೆ "ರನ್ -ಕೇರಳ -ರನ್ " ಸಾಮೂಹಿಕ ಓಟದಲ್ಲಿ ಭಾಗವಹಿಸಿದರು. 




Thursday, January 15, 2015

ಸ್ವಾಮಿ ವಿವೇಕಾನಂದರವರ 152ನೇ ಜನ್ಮದಿನೋತ್ಸವ ಆಚರಣೆ

ಸ್ವಾಮಿ ವಿವೇಕಾನಂದ ರವರ 152ನೇ ಜನ್ಮ ದಿನೋತ್ಸವವನ್ನು ನಮ್ಮ ಶಾಲಾ ಸಮಾಜವಿಜ್ಞಾನ ಕ್ಲಬ್ ನ ನೇತೃತ್ವ ದಲ್ಲಿ ನಡೆಸಲಾಯಿತು. ನಮ್ಮ ಶಾಲಾ  ಮುಖ್ಯ ಶಿಕ್ಷಕಿಯವರು  ಸ್ವಾಮಿ ವಿವೇಕಾನಂದ ರವರ" ಉತ್ತಮನಾಗು..  ಉಪಕಾರಿಯಾಗು " ಎಂಬ ವಿಚಾರವನ್ನು ತಮ್ಮಭಾಷಣ ದಲ್ಲಿ  ಹೇಳುವ   ಮೂಲಕ  ಮಕ್ಕಳಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಪರಿಕಲ್ಪನೆ ಯನ್ನು ಮೂಡಿಸಿದರು . ನಂತರ ಚಕ್ರವರ್ತಿ ಸೂಲಿಬೆಲೆ ಯವರ "ಜಾಗೋ ಭಾರತ್ "ನ  ವೀಡಿಯೋ ಪ್ರದರ್ಶಿಸಲಾಯಿತು... ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು ...