" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Thursday, February 12, 2015

"ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ"

10-02-2015 ನೇ  ಮಂಗಳವಾರ  ಕೇರಳ ಅರಣ್ಯ ಹಾಗೂ ವನ್ಯಮೃಗ ಸಂರಕ್ಷಣಾ  ಇಲಾಖೆಯ ವತಿಯಿಂದ " ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ" ಎಂಬ ವಿಷಯದ ಕುರಿತು ಮಕ್ಕಳಿಗೆ  ವಿಚಾರ ಗೋಷ್ಠಿ ಯನ್ನು ಹಮ್ಮಿ ಕೊಳ್ಳಲಾಯಿತು... ಈ  ವಿಚಾರ ಗೋಷ್ಠಿಯಲ್ಲಿ  ಜಿಲ್ಲಾ ಅರಣ್ಯಾಧಿಕಾರಿ ಶ್ರೀ ಮುರಳೀಧರನ್ ರವರು ಹಾಜರಿದ್ದು ,ಸಂಪನ್ಮೂಲ ವ್ಯಕ್ತಿ ಶ್ರೀ ಭಾಸ್ಕರ ಬೆಳ್ಳೂರು ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು..





Tuesday, January 20, 2015


20-01-2015 : -ರಾಜ್ಯ ದಲ್ಲಿ ನಡಯುವ ರಾಷ್ಟ್ರೀಯ  ಕ್ರೀಡಾ ಕೂಟಕ್ಕೆ  ಉತ್ತೇಜನ ಸಂದೇಶ  ಹಾಗೂ ಪ್ರಚಾರ  ನೀಡುವ ಉದ್ದೇಶದಿಂದ ನಮ್ಮ ಶಾಲಾ ಮಕ್ಕಳು ಇಂದು  ಬೆಳಗ್ಗೆ "ರನ್ -ಕೇರಳ -ರನ್ " ಸಾಮೂಹಿಕ ಓಟದಲ್ಲಿ ಭಾಗವಹಿಸಿದರು. 




Thursday, January 15, 2015

ಸ್ವಾಮಿ ವಿವೇಕಾನಂದರವರ 152ನೇ ಜನ್ಮದಿನೋತ್ಸವ ಆಚರಣೆ

ಸ್ವಾಮಿ ವಿವೇಕಾನಂದ ರವರ 152ನೇ ಜನ್ಮ ದಿನೋತ್ಸವವನ್ನು ನಮ್ಮ ಶಾಲಾ ಸಮಾಜವಿಜ್ಞಾನ ಕ್ಲಬ್ ನ ನೇತೃತ್ವ ದಲ್ಲಿ ನಡೆಸಲಾಯಿತು. ನಮ್ಮ ಶಾಲಾ  ಮುಖ್ಯ ಶಿಕ್ಷಕಿಯವರು  ಸ್ವಾಮಿ ವಿವೇಕಾನಂದ ರವರ" ಉತ್ತಮನಾಗು..  ಉಪಕಾರಿಯಾಗು " ಎಂಬ ವಿಚಾರವನ್ನು ತಮ್ಮಭಾಷಣ ದಲ್ಲಿ  ಹೇಳುವ   ಮೂಲಕ  ಮಕ್ಕಳಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಪರಿಕಲ್ಪನೆ ಯನ್ನು ಮೂಡಿಸಿದರು . ನಂತರ ಚಕ್ರವರ್ತಿ ಸೂಲಿಬೆಲೆ ಯವರ "ಜಾಗೋ ಭಾರತ್ "ನ  ವೀಡಿಯೋ ಪ್ರದರ್ಶಿಸಲಾಯಿತು... ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು ...