Tuesday, October 2, 2018
ಅಕ್ಟೋಬರ್ 2 ಗಾಂಧಿ ಜಯಂತಿ
Friday, September 14, 2018
ಲಿಟ್ಲ್ ಕೈಟ್ಸ್ ಏಕದಿನ ಶಿಬಿರ
Monday, August 27, 2018
ಸ್ವಾತಂತ್ರ್ಯ ದಿನ ಆಚರಣೆ
ಎಡನೀರು: ಅಗೋಸ್ತು 15 ರಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಬ್ರಮದಲ್ಲಿ ಆಚರಣೆ ಮಾಡಲಾಯಿತು.ಬೆಳಗ್ಗೆ ವರುಣನ ಅಡಚಣೆ ಇದ್ದರೂ, 9:40 ಕ್ಕೆ ಸರಿಯಾಗಿ ಧ್ವಜಾರೋಹಣವನ್ನು ನಮ್ಮ ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ನಾರಾಯಣ್ ರವರು ನಡೆಸಿ ಮಕ್ಕಳಿಗೆ ಹಿತವಚನವನ್ನು ಹೇಳಿದರು. ಗೌರವಾನ್ವಿತ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲುರವರು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವಲ್ಲಿ ಯಶಸ್ವಿಯಾದರು.
ನಂತರ ನಡೆದ ಭಾಷಣ, ಪ್ರಬಂಧ,ಸ್ವಾತಂತ್ರ್ಯ ದಿನಾಚರಣಾ ರಸಪ್ರಶ್ನೆ ,ದೇಶಭಕ್ತಿ ಹಾಡಿನ ಸ್ಪರ್ಧೆಗಳಲ್ಲಿ ಮಕ್ಕಳು ಆಸಕ್ತಿ ಯಿಂದ ಭಾಗವಹಿಸಿದರು.ಕಾರ್ಯಕ್ರಮದ ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಎಲ್ಲರಿಗೂ ಸಿಹಿತಿಂಡಿ ವಿತರಿಸಿ,12:30 ಕ್ಕೆ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.
ಚಾಂದ್ರ ದಿನ ಆಚರಣೆ
ಜುಲೈ 23 ನೇ ಸೋಮವಾರ ನಮ್ಮ ಶಾಲೆಯಲ್ಲಿ ಚಾಂದ್ರ ದಿನ ಆಚರಿಸಲಾಯಿತು. ಜುಲೈ 21 ರ ದಿನದ ಮಹತ್ವದ ಕುರಿತು ಮುಖ್ಯೋಪಾಧ್ಯಾಯಿನಿ ತಿಳಿಸಿದರು. ಚಾಂದ್ರ ಯಾನದ ವೀಡಿಯೋ ಪ್ರದರ್ಶಿಸಲಾಯಿತು. ಹೈಸ್ಕೂಲು ಮಟ್ಟದಲ್ಲಿ ಚಾಂದ್ರದಿನ ಸೆಮಿನಾರ್ ಹಾಗೂ ಎಲ್ಲಾ ವಿಭಾಗದಲ್ಲಿ ಚಾಂದ್ರದಿನದ ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆ ಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
Monday, July 2, 2018
ರಾಷ್ಟ್ರೀಯ ವೈದ್ಯ ದಿನ ಆಚರಣೆ
ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ರಾಷ್ಟ್ರೀಯ ವೈದ್ಯ ದಿನ : ಜೂನ್ 1 ಆಚರಣೆಯು ಮರುದಿನ ಸೋಮವಾರ ನಡೆಯಿತು. ಸಭೆಯಲ್ಲಿ ಹಿರಿಯ ಶಿಕ್ಷಕಿ ಜ್ಯೋತಿಲಕ್ಷ್ಮಿ ಯವರು ಮಕ್ಕಳಿಗೆ ವೈದ್ಯ ದಿನದ ವಿಶೇಷತೆಯನ್ನು ಹೇಳಿದರು. ವಿಜ್ಞಾನ ಕ್ಲಬ್ ನ ಮಕ್ಕಳು ಔಷದೀಯ ಸಸ್ಯಗಳ ಕುರಿತು ತಯಾರಿಸಿದ ಸೆಮಿನಾರ್ ನ್ನು ನಮ್ಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕು. ವೈದೇಹಿ ಮಂಡಿಸಿದಳು. ನಂತರ ಕಾರ್ಯಕ್ರದಲ್ಲಿ ವಿಜ್ಞಾನ ಕ್ಲಬ್ ನ ಮಕ್ಕಳು ಸಂಗ್ರಹಿದ ಅನೇಕ ವಿವಿಧ ಬಗೆಯ ಔಷದೀಯ ಸಸ್ಯಗಳನ್ನು ಪ್ರದರ್ಶನಕ್ಕಿಡಲಾಯಿತು. ಮಕ್ಕಳು ಆಸಕ್ತಿಯಿಂದ ವೀಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ- ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
Saturday, June 23, 2018
ಯೋಗಯುಕ್ತ-ರೋಗಮುಕ್ತ :ಶಾರದಾ ಎಡಕೊಡ್ಲು
ಎಡನೀರು: ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆಯನ್ನು 21ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶಾರದಾ ಎಡಕೊಡ್ಲುರವರು ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯನ್ನು ನೆನಪಿಸಿ ಯೋಗ ಒಂದು ದಿನಕ್ಕೆ ಮಾತ್ರ ಮೀಸಲಿರದೆ ದಿನನಿತ್ಯ ಯೋಗ ಮಾಡಿದರೆ ನಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳ ಬಹುದು ಹಾಗೆಯೇ ಯೋಗಯುಕ್ತ-ರೋಗಮುಕ್ತ ಎಂದು ಮಕ್ಕಳಿಗೆ ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಒಂದು ದಿನದ ಯೋಗ ತರಬೇತಿಯನ್ನು ಶ್ರೀಮತಿ ಕಲಾ ಹಾಗೂ ಶ್ರೀ ವಿಶ್ವನಾಥ ಭಟ್ ರವರು ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ಗಳೂ ಭಾಗವಹಿಸಿದ್ದರು.