" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Friday, June 1, 2018

ಶಾಲಾಪ್ರವೇಶೋತ್ಸವ 2018-19

ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನಲ್ಲಿ  ಜೂನ್ ಒಂದನೇ ತಾರೀಕಿನಂದು ಶಾಲಾಪ್ರವೇಶೋತ್ಸವವು ಜರಗಿತು.ಮಕ್ಕಳನ್ನುಮೆರೆವಣಿಗೆಯೊಂದಿಗೆ ಪ್ರವೇಶೋತ್ಸವದ ಗೀತೆಯನ್ನು ಕೇಳಿಸುವ ಮುಖಾಂತರ ಶಾಲೆಗೆ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದ ಎಡೆಕೋಡ್ಲುರವರು ಮಕ್ಕಳಿಗೆ ಶುಭ ಹಾರೈಸಿದರು. ನಮ್ಮ ಶಾಲಾಪ್ರವೇಶೋತ್ಸವದ ಉದ್ಘಾಟನೆಯನ್ನು ಪಂಚಾಯತು ಉಪಾಧ್ಯಕ್ಷೆ  ಶ್ರೀಮತಿ ಶಾಂತಕುಮಾರಿಯವರು ನೂತನ  ವಿದ್ಯಾರ್ಥಿಗಳಿಗೆ ಪುಸ್ತಕ,ಪೆನ್ನನ್ನೂ ನೀಡಿ ಶುಭ ಹಾರೈಸಿದರು . ಶಾಲಾ ಸಹ ಶಿಕ್ಷಕ ವೆಂಕಟಕೃಷ್ಣ ಕೆ ಯವರು ಶಿಕ್ಷಣಮಂತ್ರಿಯವರ ಸಂದೇಶವನ್ನು ವಾಚಿಸಿದರು  ನಂತರ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತುಶಾಲಾ ಅಧ್ಯಾಪಕರೂ, ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.




Friday, October 27, 2017

ಉಪಜಿಲ್ಲಾಮಟ್ಟದ ಶಾಸ್ತ್ರಮೇಳದಲ್ಲಿ ಪ್ರಥಮ

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ  ಶಾಸ್ತ್ರಮೇಳದ ಹೈಸ್ಕೂಲ್   ವಿಭಾಗದ ಐ .ಟಿ  ಕನ್ನಡ ಟೈಪಿಂಗ್ ಸ್ಪರ್ಧೆಯಲ್ಲಿ  ವೈದೇಹಿ ಕೆ    'ಎ ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ   ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿನಿ  . ಎಡನೀರಿನ  ಕಳೇರಿ  ಗೋಪಾಲಕೃಷ್ಣ  ಹೇರಳ. ಕೆ  ಹಾಗೂ  ರಾಜೇಶ್ವರಿ.ಕೆ  ದಂಪತಿಯವರ ಸುಪುತ್ರಿ.

ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ದ್ವಿತೀಯ....

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ ಶಾಸ್ತ್ರ ಮೇಳದಲ್ಲಿ ಹೈಸ್ಕೂಲ್   ವಿಭಾಗದ ಐ .ಟಿ  ರಸಪ್ರಶ್ನೆ ಸ್ಪರ್ಧೆಯಲ್ಲಿ   ವಿವೇಕ ಎಸ್.  ಭಟ್   'ಎ ' ಗ್ರೇಡಿನೊಂದಿಗೆ ದ್ವಿತೀಯ  ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆಯಾಗಿದ್ದಾನೆ . ಈತ  ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿ. ಈತ ಎಡನೀರಿನ  ಕಳೇರಿ  ಡಾ . ಸುಬ್ರಹ್ಮಣ್ಯ ಭಟ್ ಹಾಗೂ  ಸರೋಜ ದಂಪತಿಯವರ ಸುಪುತ್ರ.