" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, February 27, 2024

ಯಕ್ಷಗಾನ ನಮ್ಮ ಶಾಲಾ ಮಕ್ಕಳಿಂದ ..

ಎಡನೀರು: ಇಲ್ಲಿನ ಸ್ವಾಮೀಜೀಸ್ ಹೈಯರ್ ಸೆಕಂಡರಿ ಶಾಲೆಯ ಸಭಾಂಗಣದಲ್ಲಿ     ಶ್ರಿ ಶ್ರಿ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ  ದಿವ್ಯ ಅನುಗ್ರಹದೊಂದಿಗೆ  ಯಕ್ಷ ಗುರು ಸೂರ್ಯನಾರಾಯಣ ಪದಕಣ್ಣಾಯರ ನೇತೃತ್ವದಲ್ಲಿ ಶ್ರೀಮತಿ ವಿದ್ಯಾ ಆನಂದ ಭಟ್ ಅವರ ನಿರ್ದೇಶನದಲ್ಲಿ ಶಾಲೆಯ ಮಕ್ಕಳು  ಯಕ್ಷಗಾನ 'ಸುದರ್ಶನ ಗರ್ವಭಂಗ' ಎಂಬ ಯಕ್ಷಗಾನವನ್ನು ಆಡಿ ತೋರಿಸಿದರು. ಕು. ಅಭಿಜ್ಞ ಬೊಳುಂಬು,  ಕು. ಭಾಗ್ಯಲಕ್ಷ್ಮಿ ಕುಂಚಿನಡ್ಕ ಜೊತೆಗೂಡಿ ಎಡನೀರಿನ ಸ್ವಾಮೀಜೀಸ್ ಹೈಯರ್ ಸೆಕಂಡರಿ ಶಾಲೆಯ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಯಕ್ಷಾಭಿಮಾನಿಗಳ ಸಹಕಾರದಿಂದ ಯಕ್ಷಗಾನ ಯಶಸ್ವಿಯಾಗಿ ಮೂಡಿಬಂತು.
ದಿನಾಂಕ : 27/02/2024

Sunday, March 12, 2023

ಎಡನೀರು: ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಕಲಿಕೋತ್ಸವವು 08-03-2023 ನೇ ಬುಧವಾರ ನಡೆಯಿತು. ಪಂಚಾಯತ್ ವಾರ್ಡ್ ಮೆಂಬರ್ ಹಾಗೂ ನಮ್ಮ ಶಾಲೆಯ PTA ಅಧ್ಯಕ್ಷರು ಆದ ಸಲೀಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯನಿ ಜ್ಯೋತಿಲಕ್ಷ್ಮಿ ರವರು ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು.ಮಕ್ಕಳು ವಿವಿಧ ವೈವಿಧ್ಯಮಯವಾದ ಕಾರ್ಯಕ್ರಮಗಳ ಮೂಲಕ ಕಲಿಕೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

Saturday, November 20, 2021

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

 ಕೇರಳ ಸರ್ಕಾರದ "ಶಿಕ್ಷಾ ಕಿರಣ" ಯೋಜನೆಯ ಅಂಗವಾಗಿ 23 ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್  ವಿತರಿಸಲಾಯಿತು.

Sunday, November 14, 2021

ಮಕ್ಕಳು ಮನೆಯಲ್ಲಿ ಮಾಡಿದ ತರಕಾರಿ ಕೃಷಿ

ಕೊರೋನಾ ಸಮಯದ ಅವಧಿಯಲ್ಲಿ ನಮ್ಮ ಶಾಲಾ ಯುಪಿ ವಿಭಾಗದ ವಿದ್ಯಾರ್ಥಿಗಳು ಮನೆಯಲ್ಲಿ  ಮಾಡಿದ ತರಕಾರಿ ಕೃಷಿ.

Friday, November 12, 2021

2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಎಡನೀರು:2020-21 ನೇ ಸಾಲಿನ SSLC ಪರೀಕ್ಷೆಯಲ್ಲಿ  ಎಲ್ಲಾ ವಿಷಯಗಳಲ್ಲೂ 'ಎ+' ಗಳಿಸಿದ ವಿದ್ಯಾರ್ಥಿಗಳಾದ  ದೇವಿಕಾ ಶಿವಾನಿ,ಶ್ರಾವ್ಯ, ದೇವಿಕಾ ,ರೆಶ್ಮಿಪ್ರಭ,ಶೃತಿ,ಗುರುಕಿರಣ್, ಕೀರ್ತಿ  ಹಾಗೂ '9 ಎ+'ಗಳಿಸಿದ ವಿದ್ಯಾರ್ಥಿನಿಯಾದ ಪೂಜ‍ಾ ನನ್ನು ಶಾಲಾ ವತಿಯಿಂದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದರು.

Tuesday, March 3, 2020

ಶಾಲಾ ಕಲಿಕೋತ್ಸವ 26/02/2020

ನಮ್ಮ  ಶಾಲಾ ಕಲಿಕೋತ್ಸವವು 26 ನೇ ತಾರೀಖಿನಂದು ನಡೆಯಿತು. ಮುಖ್ಯೋಪಾಧ್ಯಾಯರಾದ ಮಧುಸೂದನನ್ ರವರು 7ನೇ ತರಗತಿಯ ಮಕ್ಕಳು ಸಿದ್ಧಗೊಳಿಸಿದ 'ವಿಂಗ್ಸ್'  ಎಂಬ ಮ್ಯಾಗಜೀನ್  ನ್ನು ಬಿಡುಗಡೆಗೊಳಿಸಿ  ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಪಿ.ಟಿ.ಎ ಉಪಾಧ್ಯಕ್ಷರಾದ ಪುರುಷೋತ್ತಮ ಕಲ್ಲುಗದ್ದೆಯವರು ಅತಿಥಿ ಯಾಗಿದ್ದರು.ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಿದರು. ವಿಜ್ಞಾನದ ಪ್ರಯೋಗ, ನಾಟಕ, ಸಮಾಜ ವಿಜ್ಞಾನದಲ್ಲಿ ಕಿರುನಾಟಕ, ಚಾರ್ಟ್, ಮೋಡೆಲ್ಸ್ , ಗಣಿತದಲ್ಲಿ  ಚಾರ್ಟ್ ಹಾಗೂ ಸೆಮಿನಾರ್ , ಇಂಗ್ಲೀಷ್‌ನಲ್ಲಿ ನಾಟಕ ಹಿಂದಿಯಲ್ಲಿ ಸಂಸ್ಕೃತದಲ್ಲಿ  ಹಾಡು ಹೀಗೆ ಹಲವಾರು ಕಾರ್ಯಕ್ರಮವನ್ನು ಮಕ್ಕಳು ನಡೆಸಿ ಕೊಟ್ಟರು. ಈ ಕಲಿಕಾ ವರ್ಷದಲ್ಲಿ  ಕಲಿತ  ಅನುಭವಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಿದರು.  ನಮ್ಮ  ಡಿ.ಪಿ.ಒ ಕಾರ್ಯಕ್ರಮವನ್ನು  ವೀಕ್ಷಿಸಿದರು.ಶಿಕ್ಷಕರು,ಪಿ.ಟಿ.ಎ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Saturday, November 9, 2019

ಕಾಸರಗೋಡು ಉಪಜಿಲ್ಲಾ ಮಟ್ಟದ ಸಂಸ್ಕೃತೋತ್ಸವದಲ್ಲಿ ಚಾಂಪಿಯನ್ ಪಡೆದ ಸ್ವಾಮೀಜೀ ಸ್ ಹೈಸ್ಕೂಲ್ ಎಡನೀರು

ಅಮ್ಮಂ ದಿರಿಗೆ ಐ. ಟಿ. ತರಬೇತಿ

ಎಡನೀರು: ಅಮ್ಮಂದಿರಿಗೆ ಐ.ಟಿ. ತರಬೇತಿಯಯು ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಜರಗಿತು. ಹೊಸ ಪಾಠ ಪುಸ್ತಕದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನರ್ , ಸಮಗ್ರ ಪೋರ್ಟಲ್,   ವಿಕ್ಟರ್ ಚಾನೆಲ್  ಇತ್ಯಾದಿಗಳ ಪರಿಚಯವನ್ನು ಮಾಡಿಕೊಡಲಾಯಿತು.  ಶಾಲಾ ಮುಖ್ಯೋಪಾಧ್ಯಾಯ  ಮಧುಸೂದನ್ ಉ ಪಸ್ಥಿತರಿದ್ದರು.  ಭಾರತಿ ಟೀಚರ್ ತರಬೇತಿ  ನೀಡಿದರು ಜ್ಯೋತಿಲಕ್ಷ್ಮಿ ಟೀಚರ್ ಸ್ವಾಗತಿಸಿ ಅಧ್ಯಾಪಕ ವೆಂಕಟಕೃಷ್ಣ ವಂದಿಸಿದರು.ಅಧ್ಯಾಪಕರು ಮತ್ತು   little kites ಮಕ್ಕಳು ಸಹಕರಿಸಿದರು

ಉಪ ಜಿಲ್ಲಾ ಮಟ್ಟದ ಕಲೋತ್ಸವದ ಸಾಧಕರು

ಕು.ಅನ್ವಿತಾ.ಎನ್ .ಸಿ.
ಕು.ವೈದೇಹಿ.ಕೆ.   
ಕು.ಶ್ರೀಪ್ರಿಯಾ.ಎಮ್ 
ಕು.ಅಮೃತ ಯು.ಆರ್
ಸುಧಾಸರಸ್ವತಿ ಸಿ.ಎಚ್
ವಿವೇಕ .ಎಸ್ .ಭಟ್

ಕು.ಪೂಜಾ.ಕ
ಕು.ಶ್ರೀನಂದಾ.ಎಮ್




 ಕೊಳತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾಸರಗೋಡು ಉಪ ಜಿಲ್ಲಾ ಮಟ್ಟದ ಸಂಸ್ಕೃತೋತ್ಸವದ ಕವಿತಾರಚೆನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಅನ್ವಿತಾ.ಎನ್ .ಸಿ.  ಉಪ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ,ಕನ್ನಡ ಕಂಠಪಾಠ,ಹಾಗೂ ಸಂಸ್ಕೃತೋತ್ಸವದ ಕಥಾರಚನೆ,ಅಷ್ಟಪದಿಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವೈದೇಹಿ.ಕೆ. ಸಂಸ್ಕೃತೋತ್ಸವದ ಉಪನ್ಯಾಸ ರಚನೆ ,ಸಮಸ್ಯಾಪೂರಣಂ,ಪಾಡಕಂ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಕು.ಶ್ರೀಪ್ರಿಯಾ.ಎಮ್ .    ಕಲೋತ್ಸವದಲ್ಲಿ  ಕನ್ನಡ ಕಥಾರಚನೆ ಹಾಗೂ ಕವಿತಾರಚನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ   ಅಮೃತ ಯು.ಆರ್ .  ಸಂಸ್ಕೃತೋತ್ಸವದ ಪ್ರಭಾಶಣಮ್ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಸುಧಾಸರಸ್ವತಿ ಸಿ.ಎಚ್ .    ಸಂಸ್ಕೃತೋತ್ಸವದ  ಪ್ರಶ್ನೊತ್ತರಿಯಲ್ಲಿ   'ಎ' ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವಿವೇಕ .ಎಸ್ .ಭಟ್ಸಂಸ್ಕೃತೋತ್ಸವದ  ಅಕ್ಷರಶ್ಲೊಕಮ್ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಕು.ಪೂಜಾ.ಕೆ ಸಂಸ್ಕೃತೋತ್ಸವದ ಉಪನ್ಯಾಸ ರಚನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಶ್ರೀನಂದಾ.ಎಮ್.  ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು   ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ನಮ್ಮ ಶಾಲಾ ಪರವಾಗಿ ಅಭಿನಂದನೆಗಳು .









Thursday, June 20, 2019

ವಾಚನ ವಾರ ಆಚರಣೆ

ಎಡನೀರು: ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೂನ್‌ 19 ತಾರೀಕಿನಂದು  ವಾಚನ ವಾರವನ್ನು ಉದ್ಘಾಟಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಮಧುಸೂದನನ್ ಪಿ.ಎನ್ ವರು ಉದ್ಘಾಟಿಸಿದರು. ಪಿ.ಎನ್ ಪಣಿಕ್ಕರ್ ಅವರ ನೆನಪಿನ ಅಂಗವಾಗಿ ಆಚರಿಸುವ ವಾಚನ ವಾರದ ಉದ್ದೇಶವನ್ನು ಮಕ್ಕಳಿಗೆ ತಿಳಿಸಿದರು. ಬಿ .ಆರ್ .ಸಿ. ಕಾಸರಗೋಡಿನ ಪ್ರತಿನಿಧಿಯಾಗಿ ಬಂದಂತಹ ಸುರೇಶ್ ಕುಮಾರ್ ಅವರು ಮಕ್ಕಳಿಗೆ ಓದುವಿನ ಮಹತ್ವ ಹೇಳಿದರು ಹಾಗೆ ಪುಸ್ತಕವನ್ನು   ನೀಡಿದರು..

Thursday, June 6, 2019

ಎಡನೀರು :06/06/19 ಸ್ವಾಮೀಜಿಸ್  ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ನಡೆಯಿತು.ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕನ ಶ್ಯಾಮ್ ರಾಜ ಅವರು ಈ ವರ್ಷವೂ  ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ,ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯರಾದ ಮಧುಸೂದನ್ ವರು , ಶಿಕ್ಷಕರಾದ ವೆಂಕಟಕೃಷ್ಣ ಹಾಗೂ ಜ್ಯೋತಿ ಲಕ್ಷ್ಮಿ ಯವರು ಮಕ್ಕಳಿಗೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಸಂಸ್ಕೃತ ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಯು.ಎಸ್.ಎಸ್ ಪರೀಕ್ಷೆ ಸ್ಕಾಲರ್ ಶಿಪ್ ಗಳಿಸಿದ ಶ್ಯಾಮ್ ಸುಬ್ರಹ್ಮಣ್ಯ ಶರ್ಮಾ ಅವನನ್ನು ಸನ್ಮಾನಿಸಲಾಯಿತು.


Saturday, February 9, 2019

'ಕಲಿಕೋತ್ಸವ' ನಮ್ಮ ಶಾಲೆಯಲ್ಲಿ

ಎಡೆನೀರು: ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಕೋತ್ಸವ ಇದೇ ಶುಕ್ರವಾರ ಜರಗಿತು. ಚೆಂಗಲ ಪಂಚಾಯತ್ ಉಪಾಧ್ಯಕ್ಷೆಯಾದ ಶ್ರೀಮತಿ ಶಾಂತಕುಮಾರಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ  ವ್ಯಕ್ತಿತ್ವ ಬೆಳವಣಿಗೆಯಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ಹೇಳಿದರು . 7ನೇ ತರಗತಿ ವಿದ್ಯಾರ್ಥಿಗಳು ರಚಿಸಿದ ಇಂಗ್ಲೀಷ್ ಮ್ಯಾಗಜಿನ್ ' ಡ್ರಿಝಿಲ್ 'ನ್ನು  ಶಾಂತಕುಮಾರಿ ಟೀಚರ್ ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲು ರವರು ಅಧ್ಯಕ್ಷರಾಗಿದ್ದರು. ಕಾಸರಗೋಡು ಬಿ.ಆರ್.ಸಿ ಯ  ಸಂಯೋಜಕಿಯಾದ ವೀಣಾ ಕಲಿಕೋತ್ಸವದ ಉದ್ದೇಶಗಳನ್ನು ಹೇಳಿದರು . ಸಹ ಸಂಚಾಲಕರಾದ ಮಧುಸೂಧನನ್ ರವರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಎಸ್.ಎಮ್.ಸಿ  ಸದಸ್ಯರು ,ಪಿ.ಟಿ.ಎ  ,ಎಮ್.ಪಿ.ಟಿ .ಎ ಅಧ್ಯಕ್ಷರು ಹಾಗೂ  ಸದಸ್ಯರೂ ಉಪಸ್ಥಿತರಿದ್ದರು. ಗಣಿತ,ವಿಜ್ಞಾನ, ಭಾಷೆ, ಸಮಾಜ ವಿಜ್ಞಾನ ಹೀಗೆ ಹಲವಾರು ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿನಿ ಅನನ್ಯ ಸಿ.ಎಚ್ ಕಾರ್ಯಕ್ರಮವನ್ನು ನಿರೂಪಿಸಿದಳು. ಪ್ರಜ್ಞಾ ಸ್ವಾಗತಿಸಿ,ವಿದ್ಯಾರ್ಥಿ ಶ್ಯಾಮ ಸುಬ್ರಹ್ಮಣ್ಯ ವಂದಿಸಿದನು.



Thursday, January 31, 2019

ಕಲಿಕೋತ್ಸವ 2018-19

ನಮ್ಮ ಶಾಲೆಯ ಕಲಿಕೋತ್ಸವ 08 ಫೆಬ್ರವರಿ 2019 ರಂದು ನಡೆಸಲು ತೀರ್ಮಾನ ತೆಗೆದುಕೊಳ್ಳುವುದು. ಪಂಚಾಯತ್ ಉಪಾಧ್ಯಕ್ಷೆ  ಶಾಂತ ಕುಮಾರಿಯವರು ಮುಖ್ಯಅತಿಥಿಯಾಗಿ ಭಾಗವಹಿಸುವರು.

Tuesday, October 30, 2018

ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ  

ಹೈಸ್ಕೂಲ್ ಹಾಗೂ ಯುಪಿ ವಿಭಾಗದ ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ   12 ನೇ ತಾರೀಕು ಶಾಲೆಯಲ್ಲಿ ನಡೆಸಲಾಯಿತು.ಪ್ರತ್ಯೇಕವಾಗಿ ಇಪ್ಪತ್ತು ಇಪ್ಪತ್ತರ ಹಾಗೆ ಎರಡು ಗುಂಪುಗಳನ್ನು ಮಾಡಲಾಯಿತು ಒಟ್ಟು 40 ಮಕ್ಕಳನ್ನು ಆಯ್ಕೆ ಮಾಡಲಾಯಿತು.



Tuesday, October 23, 2018

ಶಾಲಾ ಕಲೋತ್ಸವ

ಎಡನೀರು : ನಮ್ಮ ಶಾಲೆಯ ಶಾಲಾ ಕಲೋತ್ಸವ ಇದೇ ತಿಂಗಳ 16 ಹಾಗೂ 20 ನೇ ತಾರೀಕು ನಡೆಯಿತು.ಮುಖ್ಯೋಪಾಧ್ಯಾಯಿನಿ ಶಾರದಾ ಎಡೆಕೋಡ್ಲು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, " ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ  ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಎಂದು ಹೇಳಿದರು. ಸ್ಪರ್ಧಾ ಮನೋಭಾವನೆ ಬೆಳೆಸಲು ಈ ರೀತಿಯ ಕಾರ್ಯಕ್ರಮ ಮಕ್ಕಳಿಗೆ ಒಳ್ಳೆಯ ವೇದಿಕೆ " ಎಂದು ಹೇಳಿದರು.
ಎರಡು ದಿನ ನಡೆದ ಕಲೋತ್ಸವದಲ್ಲಿ ತಿರುವಾದಿರ,ನಾಡ-ನೃತ್ಯ೦,ಭರತನಾಟ್ಯ,ಯಕ್ಷಗಾನ ,ಮೂಕಾಭಿನಯ ,ಮಿಮಿಕ್ರಿ, ಮಾಪಿಳ್ಳೆ ಪಾಟ್ , ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಿತು.  ಸಂಸ್ಕೃತೋತ್ಸವ ಜೊತೆಗೆ ನಡೆಯಿತು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಎಲ್ಲಾ  ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

Tuesday, October 2, 2018

ಅಕ್ಟೋಬರ್ 2 ಗಾಂಧಿ ಜಯಂತಿ

ಎಡನೀರು: ಅಕ್ಟೋಬರ್ 2 ಗಾಂಧಿ ಜಯಂತಿಯನ್ನು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜೃಂಭಣೆಯಿಂದ  ಆಚರಿಸಲಾಯಿತು. ಬೆಳಗ್ಗೆ 9:30ಕ್ಕೆ ಸರಿಯಾಗಿ ಸಭೆ ಸೇರಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶಾರದ ಅಡೆಕೋಡ್ಲುರವರು  ಶಾಲಾ ಪರಿಸರ ಸ್ವಚ್ಛವಾಗಿಟ್ಟುಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಹಾಗೂ ಗಾಂಧಿ ತತ್ವ ನಮಗೆಲ್ಲಾ ಅನುಕರಣೀಯ ಎಂದು ಹೇಳಿದರು. ನಂತರ ಶಾಲಾ ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದ ಮಾರ್ಗದರ್ಶನದಲ್ಲಿ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛ ಗೊಳಿಸಿದರು. ಕೊನೆಯಲ್ಲಿ ಲಘು ಉಪಹಾರ ಹಾಗೂ ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು.